ADVERTISEMENT

ಡಾ.ರಾಜನ್‌ ದೇಶಪಾಂಡೆಗೆ ಶಂಕರ ಪ್ರತಿಷ್ಠಾನದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 11:58 IST
Last Updated 19 ಡಿಸೆಂಬರ್ 2018, 11:58 IST
ಡಾ.ರಾಜನ್‌ ದೇಶಪಾಂಡೆ
ಡಾ.ರಾಜನ್‌ ದೇಶಪಾಂಡೆ   

ಕಲಬುರ್ಗಿ: ಇಲ್ಲಿಯ ಡಾ.ಪಿ.ಎಸ್‌.ಶಂಕರ ಪ್ರತಿಷ್ಠಾನದಿಂದ ನೀಡುವ ಪ್ರಸಕ್ತ ಸಾಲಿನ‘ಡಾ.ಪಿ.ಎಸ್‌.ಶಂಕರ ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ’ಗೆ ಧಾರವಾಡದ ಮಕ್ಕಳ ತಜ್ಞ ಡಾ.ರಾಜನ್‌ ದೇಶಪಾಂಡೆ ಅವರನ್ನು ಆಯ್ಕೆಮಾಡಲಾಗಿದೆ.

ಈ ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ. ಜನವರಿ 1ರಂದು ಸಂಜೆ 5ಕ್ಕೆ ಇಲ್ಲಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ಪ್ರತಿಷ್ಠಾನದ ವಾರ್ಷಿಕೋತ್ಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ನರೇಂದ್ರ ಬಡಶೇಷಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT