ADVERTISEMENT

ವಿವೇಕಾನಂದ ಜೀವನ ದರ್ಶನ ಪ್ರವಚನ ಶುರು

12ಕ್ಕೆ ಜ್ಯೋತಿರ್ಲಿಂಗ ಮಂದಿರದ ಕಳಾಸಾರೋಹಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 11:35 IST
Last Updated 7 ಡಿಸೆಂಬರ್ 2021, 11:35 IST
ಕಮಲಾಪುರ ಪಟ್ಟಣದ ಗುರುಶಾಂತಪ್ಪ ಮಾಲಿ ಪಾಟೀಲ ಕ್ರೀಡಾಂಗಣದಲ್ಲಿ ಜೈ ಭಾರತ ಸೇವಾ ಸಂಸ್ಥೆ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜೀವನ ದರ್ಶನ ಪ್ರವಚನಕ್ಕೆ ಹವಾ ಮಲ್ಲಿನಾಥ ಮಹಾರಾಜ ಚಾಲನೆ ನೀಡಿದರು
ಕಮಲಾಪುರ ಪಟ್ಟಣದ ಗುರುಶಾಂತಪ್ಪ ಮಾಲಿ ಪಾಟೀಲ ಕ್ರೀಡಾಂಗಣದಲ್ಲಿ ಜೈ ಭಾರತ ಸೇವಾ ಸಂಸ್ಥೆ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜೀವನ ದರ್ಶನ ಪ್ರವಚನಕ್ಕೆ ಹವಾ ಮಲ್ಲಿನಾಥ ಮಹಾರಾಜ ಚಾಲನೆ ನೀಡಿದರು   

ಕಮಲಾಪುರ: ಪಟ್ಟಣದ ಹೊರ ವಲಯದ ಜ್ಯೋತಿರ್ಲಿಂಗ ಮಂದಿರದ ಕಳಸಾರೋಹಣ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ‘ವಿವೇಕಾನಂದರ ಜೀವನ ದರ್ಶನ’ ಪ್ರವಚನ ಆಯೋಜಿಸಲಾಗಿದೆ ಎಂದು ಜೈ ಭಾರತ ಸೇವಾ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನ್ನಾಥ ಮಹಾರಾಜ ಮುತ್ಯಾ ತಿಳಿಸಿದರು.

ಕಮಲಾಪುರ ಪಟ್ಟಣದಸರ್ಕಾರಿ ಕನ್ಯಾ ‍ಪ್ರೌಢ ಶಾಲೆಯ ಗುರುಶಾಂತಪ್ಪ ಮಾಲಿ ಪಾಟೀಲ ಕ್ರೀಡಾಂಗಣದಲ್ಲಿ ಸಂಸ್ಥೆ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜೀವನ ದರ್ಶನ ಪ್ರವಚನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡಿ.12ರ ಸ್ವಾಮಿ ವಿವೇಕಾನಂದ ಜಯಂತಿಯಂದು ಜ್ಯೋತಿರ್ಲಿಂಗ ದೇವಾಲಯದ ಕಳಸಾರೋಹಣ ಆಯೋಜಿಸಲಾಗಿದೆ. ಇದೇ ವೇಳೆ ಬಾಗಲಕೋಟೆಯ ರೇವಣಸಿದ್ದ ದೇವರು ಪ್ರವಚನ ನಡೆಸಿಕೊಡುವರು ಎಂದು ಹೇಳಿದರು.

ADVERTISEMENT

ಡಿ.12ರ ಬೆಳಿಗ್ಗೆ ಪಟ್ಟಣದಿಂದ ದೇವಸ್ಥಾನದವರೆಗೆ ಮಹಿಳೆಯರು ಹೊತ್ತ ಕುಂಭ, ಕಳಶ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ಜರುಗಲಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್, ಮುಖಂಡ ಜಿ.ಆರ್‌.ವಿಜಯಕುಮಾರ, ಗುರುರಾಜ ಮಾಟೂರ, ವಿಠಲ್‌ ಹೊಡಲ, ಶರಣು ಗೌರೆ, ಶರಣು ರಟಕಲ್‌, ಶಶಿಧರ ಮಾಕಾ, ಶರಣಬಸಪ್ಪ ದೊಶೆಟ್ಟಿ, ಪರಮೇಶ್ವರ ಓಕಳಿ, ಶಾಜಿರಾವ ಪಾಟೀಲ, ಸಂಗಮೇಶ ಶಾಸ್ತ್ರಿ, ಶಾಂತಕುಮಾರ ಹಿರೇಸಾವಳಗಿ, ವಕ್ತಾರ ವೈಜನಾಥ ಝಳಕಿ, ಗುಂಡಪ್ಪ ಹೊಳಕುಂದಿ, ರವಿ ಮೋಳಕೇರಿ, ಗುಂಡಪ್ಪ ಸಿರಡೋಣ, ಬಲವಂತ ಧಮ್ಮೂರ, ವೈಜನಾಥ ಮೂಲಿಮನಿ, ತೀರ್ಥ ಮೂಲಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.