ಕಲಬುರಗಿ: ವರದಕ್ಷಿಣೆ ತರಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯನ್ನು ಹೊಡೆದು ಕೊಲೆ ಮಾಡಿದ ಘಟನೆ ಕಾಳಗಿ ತಾಲ್ಲೂಕಿನ ಗಜ್ಜಲಖೇಡ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಅನಿತಾ ನಾಗರಾಜ (28) ಕೊಲೆಯಾದವರು. ಇವರಪತಿ ನಾಗರಾಜ, ಮಾವ ಹಾಗೂ ಮೈದುನ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದುಮೃತಳ ಸಂಬಂಧಿ ಸುಮಿತ್ರಾಬಾಯಿ ಸೂರ್ಯಕಾಂತ ಅವರು ಕಾಳಗಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ನಾಗರಾಜ ಹಾಗೂ ಅನಿತಾ ಮದುವೆಯಾಗಿತ್ತು. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪದೇಪದೇ ಅನಿತಾ ಅವರಿಗೆ ಪೀಡಿಸುತ್ತಿದ್ದ ನಾಗರಾಜ, ದೈಹಿಕ – ಮಾನಸಿಕ ಹಲ್ಲೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಕೂಡ ಇದೇ ಕಾರಣಕ್ಕೆ ಜಗಳ ಆರಂಭವಾಗಿದ್ದು, ಗಂಡ, ಮಾವ, ಮೈದುನ ಸೇರಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.