ADVERTISEMENT

‘ಮಹಿಳೆಗೆ ಶಿಕ್ಷಣ ರಕ್ಷಾ ಕವಚ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 2:16 IST
Last Updated 19 ಮಾರ್ಚ್ 2022, 2:16 IST
ಚಿಂಚೋಳಿಯ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದ ಮಹಿಳಾ ದಿನಾಚರಣೆಯನ್ನು ಕವಯಿತ್ರಿ ಜ್ಯೋತಿ ಡಾ. ಧನರಾಜ ಬೊಮ್ಮಾ ಉದ್ಘಾಟಿಸಿದರು. ಗೀತಾರಾಣಿ, ಅರುಣಾ, ಸ್ವಾತಿ ಇದ್ದರು
ಚಿಂಚೋಳಿಯ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದ ಮಹಿಳಾ ದಿನಾಚರಣೆಯನ್ನು ಕವಯಿತ್ರಿ ಜ್ಯೋತಿ ಡಾ. ಧನರಾಜ ಬೊಮ್ಮಾ ಉದ್ಘಾಟಿಸಿದರು. ಗೀತಾರಾಣಿ, ಅರುಣಾ, ಸ್ವಾತಿ ಇದ್ದರು   

ಚಿಂಚೋಳಿ: ‘ಮಹಿಳೆಯರಿಗೆ ಶಿಕ್ಷಣ ರಕ್ಷಾಕವಚ ಇದ್ದಂತೆ’ ಎಂದು ಕವಯಿತ್ರಿ ಜ್ಯೋತಿ ಡಾ. ಧನರಾಜ ಬೊಮ್ಮಾ ತಿಳಿಸಿದರು.

ಅವರು ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿನಿಯರು ಸಾಧಕ ಮಹಿಳೆಯರ ಜೀವನ ಸಾಧನೆಗಳಿಂದ ಪ್ರೇರಿತರಾಗಬೇಕು. ಜತೆಗೆ ಸತತ ಪರಿಶ್ರಮದಿಂದ ಸಾಧನೆ ಮಾಡಲು ಮುಂದಾಗಬೇಕು’ ಎಂದರು.

ADVERTISEMENT

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಡಳಿತಾಧಿಕಾರಿ ಗೀತಾರಾಣಿ ಐನೋಳ್ಳಿ ಅಧ್ಯಕ್ಷತೆವಹಿಸಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲ ಚನ್ನವೀರ ಕಲ್ಲೂರು, ಸ್ವಾತಿ, ಕೃಷ್ಣಾ ಕಟ್ಟಿ, ಸುರೇಶ ಬಂಟನಳ್ಳಿ, ಮಧುಕರರಾವ್, ಡಾ. ಹಣಮಂತ, ರಿಯಾಜುದ್ದಿನ್, ಕರಬಸಯ್ಯ ಮಠಪತಿ ಇದ್ದರು. ಉಪನ್ಯಾಸಕಿ ಅರುಣಾ ಶಿವಪ್ರಸಾದ ಪ್ರಾಸ್ತಾವಿಕ ಮಾತನಾಡಿದರು. ವಿನುತಾ ಸ್ವಾಗತಿಸಿದರು. ರಕ್ಷಿತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.