ಶಹಾಬಾದ್: ‘ಸಂತ ಜೇಮಸಿಂಗ ಮಹಾರಾಜರು ಬಂಜಾರಾ ಸಮಾಜಕ್ಕೆ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಅವಶ್ಯಕತೆ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಸೋಮವಾರ ಹೇಳಿದರು.
ಅವರು ನಗರದ ಸಮೀಪದ ಮುಗುಳನಾಗಾವಿಯ ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿ 29ನೇ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಿ.ಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ‘ಕಾಯಕದ ಮೇಲೆ ವಿಶ್ವಾಸವಿಟ್ಟ ಬಂಜಾರಾ ಸಮಾಜಕ್ಕೆ ಒಳ್ಳೆಯ ನಾಯಕರು, ಒಳ್ಳೆಯ ಮಠಾಧೀಶರು ಸಿಗುತ್ತಿದ್ದಾರೆ’ ಎಂದರು.
ಒಂದು ತಿಂಗಳ ಮೌನಾನುಷ್ಠಾನದ ನಂತರ ಮೌನ ಮುರಿದು ಆಶೀರ್ವಚನ ನೀಡಿದ ಜೇಮಸಿಂಗ ಮಹಾರಾಜರು, ‘ಶ್ರೀ ಗುರುವಿನ ಕೃಪೆಯಿಂದ ಪ್ರಸಕ್ತ ಸಾಲಿನಲ್ಲಿ ಒಳ್ಳೆ ಬೆಳೆ ಬಂದು ರೈತರಿಗೆ ಅನುಕೂಲ ಆಗಲಿದೆ’ ಎಂದರು.
ಬಳಿರಾಮ ಮಹಾರಾಜ ಮಾತನಾಡಿದರು. ವೇದಿಕೆಯಲ್ಲಿ ಗಣಪತಿ ಮಹಾರಾಜ, ಲಚ್ಚು ಮಹಾರಾಜ, ಕಳಾವತಿ ದೇವಿ, ಸೈಯದ್ ಇಕ್ಬಾಲ್ ಅಲಿಸಾಹೇಬ್ ಉಪಸ್ಥಿತರಿದ್ದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ರಾಮಚಂದ್ರ ಜಾಧವ, ವಿಠಲ ಜಾಧವ, ಸುಭಾಷ ರಾಠೋಡ, ಶಂಕರ ಚವ್ಹಾಣ, ಜ್ಯೋತಿ ಬೆಂಗಳೂರ ಮಾತನಾಡಿದರು.
ನಾಮದೇವ ರಾಠೋಡ ಸ್ವಾಗತಿಸಿದರು. ಪುರಾಣಿಕರಾದ ಶಿವುಶಂಕರ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಟೆಂಗಳಿ ಚಂದ್ರಕಾಂತ ನಿರಗುಡಿ ತಬಲಾ ಸಾಥ್ ನೀಡಿದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ನಿರೂಪಿಸಿದರು.
ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು ಬೆಳಿಗ್ಗೆ ಜೇಮಸಿಂಗ ಮಹಾರಾಜರು ಅಗ್ನಿ ತುಳಿದು, ಧರ್ಮಸಭೆಯಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.