ಕಾಳಗಿ: ತಾಲ್ಲೂಕಿನ ಅಲ್ಲಾಪುರ ಕೆರೆ ಹತ್ತಿರ ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ಸಿಡಿಲು ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೋಡ್ಲಿ ಗ್ರಾಮದ ಅನಿಲ್ ತಂದೆ ಚಂದ್ರಶೆಟ್ಟಿ ಭೋವಿ (23) ಎಂಬುವವ ಮೃತ ದುರ್ದೈವಿ.
ಜಲ್ಲಿಕಲ್ಲು ಒಡೆಯುವ ಕೆಲಸಕ್ಕೆ ಯುವಕ ಬಂದಿದ್ದ. ಗುಡುಗು ಸಹಿತ ಮಳೆ ಬರುತ್ತಿರುವಾಗ ಮಾವಿನ ಮರದ ಆಶ್ರಯ ಪಡೆದಿದ್ದ ವೇಳೆ ಸಿಡಿಲು ಬಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.