ಮಡಿಕೇರಿ: ಇಲ್ಲಿನ ತಾಳತ್ತಮನೆ ಜಂಕ್ಷನ್ ಸಮೀಪ ಗುರುವಾರ ಬೈಕ್ ಮತ್ತ ಟಿ.ಟಿ.ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಉದಿಯಂಡ ಶಂಭು ಮಂದಣ್ಣ (65) ಮೃತಪಟ್ಟಿದ್ದಾರೆ.
ತಾಳತ್ತಮನೆ ನಿವಾಸಿಯಾದ ಅವರು ಬೈಕ್ನಲ್ಲಿ ಹೋಗುವಾಗ ಟಿ.ಟಿ.ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಉದಿಯಂಡ ಶಂಭು ಮಂದಣ್ಣ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.