ADVERTISEMENT

ವಿದ್ಯುತ್‌ ಸ್ಪರ್ಶದಿಂದ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 12:51 IST
Last Updated 12 ಸೆಪ್ಟೆಂಬರ್ 2022, 12:51 IST

ಅಥಣಿ (ಬೆಳಗಾವಿ ಜಿಲ್ಲೆ):ತಾಲ್ಲೂಕಿನ ಸಂಕ್ರಟ್ಟಿ ಗ್ರಾಮದಲ್ಲಿ ಸೋಮವಾರ ವಿದ್ಯುತ್‌ ಸ್ಪರ್ಶದಿಂದ ಶಾಲಾ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೃಷಿ ಕಾರ್ಮಿಕ ಪರಮೇಶ್ವರ ಮುಗಳಖೋಡ ಅವರ ಪುತ್ರ ಮಲ್ಲಿಕಾರ್ಜುನ (13) ಮೃತಪಟ್ಟ ಬಾಲಕ. ಸೋಮವಾರ ಶಾಲೆಗೆ ಹೊರಟಿದ್ದ ಸಂದರ್ಭದಲ್ಲಿ ರಸ್ತೆ ಪಕ್ಕದ ಏರ್‌ಟೆಲ್‌ ಟವರ್‌ಗೆ ಅಳವಡಿಸಿದ್ದ ತಂತಿಯ ಜಾಳಿಗೆ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಜಾಳಿಗೆಯಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT