ADVERTISEMENT

ಕುಶಾಲನಗರ: ಡಾ.ಕಿರಣ್ ಕಾಳಪ್ಪಗೆ ಕರ್ನಲ್ ಆಗಿ ಮುಂಬಡ್ತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 6:41 IST
Last Updated 10 ನವೆಂಬರ್ 2023, 6:41 IST
ಡಾ.ಕಿರಣ್ ಕಾಳಪ್ಪ
ಡಾ.ಕಿರಣ್ ಕಾಳಪ್ಪ   

ಕುಶಾಲನಗರ: ಪಟ್ಟಣದ ಬಿ.ಎಂ ರಸ್ತೆಯ ನಿವಾಸಿ ಹೃದಯರೋಗ ತಜ್ಞ ಡಾ.ಕಿರಣ್ ಕಾಳಪ್ಪ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಆಗಿ ಮುಂಬಡ್ತಿ ಹೊಂದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಕಮಾಂಡೋ ಆಸ್ಪತ್ರೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಡಾ.ಕಿರಣ್ ಅವರು ಇದೀಗ ಮುಂಬಡ್ತಿ ಹೊಂದಿ ಕೊಲ್ಕತ್ತಾದ ಕಮಾಂಡೋ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅವರ ಪತ್ನಿ ಡಾ.ಕಾವ್ಯಶ್ರೀ ದಂತರೋಗ ತಜ್ಞರಾಗಿದ್ದಾರೆ. ಡಾ.ಕಿರಣ್ ಇಲ್ಲಿನ ಹಿರಿಯ ನಾಗರಿಕರಾದ ಚೌಡ್ಲು ಕಾಳಪ್ಪ ಹಾಗೂ ಕಾವೇರಿ ಅವರ ಪುತ್ರ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.