ADVERTISEMENT

ಕಾರ್ಮಿಕರನ್ನು ಓಡಿಸಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 13:48 IST
Last Updated 3 ಏಪ್ರಿಲ್ 2022, 13:48 IST
ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ಹಂಚಿಕಾಡು ಗ್ರಾಮದಲ್ಲಿ ಮರದ ನಾಟಾ ತುಂಬಿದ ಲಾರಿಯನ್ನು ಬೆನ್ನಟ್ಟಿದ ಕಾಡಾನೆ
ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ಹಂಚಿಕಾಡು ಗ್ರಾಮದಲ್ಲಿ ಮರದ ನಾಟಾ ತುಂಬಿದ ಲಾರಿಯನ್ನು ಬೆನ್ನಟ್ಟಿದ ಕಾಡಾನೆ   

ಸಿದ್ದಾಪುರ (ಕೊಡಗು): ಮರದ ನಾಟಾಗಳನ್ನು ತುಂಬುವ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿದ್ದಾಪುರ ಸಮೀಪದ ಹಂಚಿಕಾಡು ಗ್ರಾಮದ ರಸ್ತೆ ಬದಿಯಲ್ಲಿ ಮರದ ನಾಟಾವನ್ನು ಕಾರ್ಮಿಕರು ಲಾರಿಗೆ ತುಂಬುತ್ತಿದ್ದಾಗ ಸಮೀಪದ ತೋಟದಿಂದ ಕಾಡಾನೆ ದಾಳಿಗೆ ಮುಂದಾಗಿದೆ. ಕಾರ್ಮಿಕರು ಲಾರಿಯ ಮೇಲೆ ಏರಿ ಕುಳಿತಿದ್ದು ಚಾಲಕ ಕೂಡಲೇ ಲಾರಿ ಚಲಾಯಿಸಿದ್ದಾನೆ. ಕಾಡಾನೆಯು ಲಾರಿಯನ್ನು ಅಲ್ಪದೂರ ಬೆನ್ನಟ್ಟಿ, ವಾಪಸಾಗಿದೆ.

ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಸ್ಥಳೀಯರು, ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.