ADVERTISEMENT

ಹೊಳೆಯಲ್ಲಿ ಅರಣ್ಯ ವೀಕ್ಷಕ ತರುಣ್ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 6:58 IST
Last Updated 26 ಸೆಪ್ಟೆಂಬರ್ 2022, 6:58 IST

ವಿರಾಜಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯ ಕೊಕ್ಕಗ್ರಾಮದ ನದಿಯಲ್ಲಿ ಅರಣ್ಯ ವೀಕ್ಷಕ ವಿ.ತರುಣ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ‌.

ನಾಲ್ಕು ದಿನಗಳ ಹಿಂದೆ ಅವರು ಗಸ್ತು ಕಾರ್ಯ ನಡೆಸುತ್ತಿರುವಾಗ ನಾಪತ್ತೆಯಾಗಿದ್ದರು. ನದಿಯಲ್ಲಿ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಎನ್ ಡಿ ಆರ್ ಎಫ್ ಸಿಬ್ಬಂದಿ ಹುಡುಕಾಟ ನಡೆಸಿ, ನದಿಯಿಂದ ಶವವನ್ನು ಹೊರತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT