ಮಡಿಕೇರಿ: ಅರೆಭಾಷೆ ಅಕಾಡೆಮಿಯಲ್ಲಿ ನಿರೀಕ್ಷಿಸಿದಷ್ಟು ಕೆಲಸಗಳು ಆಗುತ್ತಿಲ್ಲ. ಹೀಗಾಗಿ, ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದುಲೇಖಕ ಎ.ಕೆ.ಹಿಮಕರ ಒತ್ತಾಯಿಸಿದರು.
ಕಳೆದ 2 ವರ್ಷಗಳಿಂದ ಒಂದೂ ಪುಸ್ತಕವೂ ಪ್ರಕಟಗೊಂಡಿಲ್ಲ. ಫೆಲೊಶಿಪ್ ನೀಡಿದ್ದ 10 ಸಂಶೋಧಕರ ಗ್ರಂಥಗಳನ್ನು ಪ್ರಕಟಿಸಿಲ್ಲ. ಕೂಡಲೇ ಈ ಗ್ರಂಥಗಳನ್ನು ಪ್ರಕಟಿಸಬೇಕು ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅರೆಭಾಷೆ ಪದಕೋಶ ಹಾಗೂ ವಿಶ್ವಕೋಶದ ರಚನೆಯ ಯೋಜನೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲ. ಸರ್ಕಾರ ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಹಾಗೂ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಲೇಖಕರಾದ ಕೆ.ಆರ್.ತೇಜಕುಮಾರ್, ಕೆ.ಆರ್.ವಿದ್ಯಾಧರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.