ಮಡಿಕೇರಿ: ‘ಮಂಜಿನ ನಗರಿ ಮಡಿಕೇರಿ ನನಗೆ ಅಚ್ಚುಮೆಚ್ಚಿನ ನಗರ. ಇಲ್ಲಿನ ಸೈನಿಕರ ವೀರತನ ಬಿಂಬಿಸುವ ‘ಮಡಿಕೇರಿ ಸಿಪಾಯಿ ಹುಚ್ಚ ವೆಂಕಟ್’ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ’ ಎಂದು ಹುಚ್ಚ ವೆಂಕಟ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಡಿಕೇರಿ ಬಗ್ಗೆ ಒಲವು ಹೆಚ್ಚಲು ಇಲ್ಲಿನ ಸಂಸ್ಕೃತಿ, ಪರಂಪರೆ ಕಾರಣ. ಬಾಲ್ಯದಿಂದಲೂ ಕೊಡಗಿನ ಜನರೆಂದರೆ ನನಗೆ ಪ್ರೀತಿ’ ಎಂದು ಹೇಳಿದರು.
ಭಾಗಮಂಡಲದಲ್ಲಿ ಶೀಘ್ರದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ. ಸೈನಿಕರ ಬಗ್ಗೆ ಅಭಿಮಾನ ಮೂಡಿಸುವ ಚಿತ್ರ ಇದು. ಭಾರತ– ಪಾಕ್ ಗಡಿಯಲ್ಲಿ ಚಿತ್ರೀಕರಿಸಲಾಗುವುದು. ಚಿತ್ರ ಪ್ರೋಮೊವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.