ಸಿದ್ದಾಪುರ: ಮನೆಯಲ್ಲೇ ನಿಲ್ಲಿಸಿದ್ದ ಕಾರಿಗೆ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಸಂದೇಶ ಬೆಂಗಳೂರು ಪೊಲೀಸರಿಂದ ಮೊಬೈಲ್ ಫೋನ್ಗೆ ಬಂದಿದ್ದು, ಕಾರು ಮಾಲೀಕ ಅಚ್ಚರಿಗೊಂಡಿದ್ದಾರೆ.
ನೆಲ್ಯಹುದಿಕೇರಿ ಗ್ರಾಮದ ಜೋಸ್ ಎಂಬವರ ಕಾರು ಆ. 22ರಂದು ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ₹ 1000 ದಂಡ ಪಾವತಿಸುವ ಬಗ್ಗೆ ಸಂದೇಶ ಬಂದಿದೆ. ಆದರೆ, ಆ. 22ರಂದು ಜೋಸ್ ಅವರು ತಮ್ಮ ಕಾರನ್ನು ಮನೆಯಲ್ಲೇ ನಿಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಸ್, ‘ನಾನು ಬೆಂಗಳೂರಿಗೆ ತೆರಳದೇ ಇದ್ದರೂ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗಿದೆ. ಯಾರೋ ಕಿಡಿಗೇಡಿಗಳು ವಾಹನದ ಸಂಖ್ಯೆಯನ್ನು ನಕಲಿ ಮಾಡಿ ಬಳಸಿರುವ ಸಾಧ್ಯತೆ ಇದೆ’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.