ಪೊನ್ನಂಪೇಟೆ: ಭಾನುವಾರ ಮಧ್ಯಾಹ್ನ ಪೊನ್ನಂಪೇಟೆ ಭಾಗದ ಕೆಲವು ಗ್ರಾಮಗಳಿಗೆ ಮಳೆಯಾಗಿದೆ. ಬಾಳೆಲೆ, ಕೊಟ್ಟಗೇರಿ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ. ಮಳೆಯ ನಿರೀಕ್ಷೆಯಲ್ಲಿದ್ದ ಶ್ರೀಮಂಗಲ ಭಾಗದ ಕೃಷಿಕರು ನಿರಾಸೆ ಅನುಭವಿಸಿದರು.
ನಿಟ್ಟೂರು ಗ್ರಾಮದಲ್ಲಿ ಜೋರಾದ ಗಾಳಿಯೊಂದಿಗೆ ಮಳೆಯಾಗಿದೆ. ಮಳೆಯಾದ ಬಹುತೇಕ ಭಾಗಗಳಲ್ಲಿ ಕೃಷಿಕರು ಕಾಫಿ ತೋಟಕ್ಕೆ ಗೊಬ್ಬರ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗಾಳಿಯ ಅಬ್ಬರ ಜೋರಾದ ಕಾರಣ ಕಾರ್ಮಿಕರು ಕೆಲಸ ಮುಂದುವರೆಸಲು ಸಾಧ್ಯವಾಗಲಿಲ್ಲ.
ಕುಟ್ಟ ಭಾಗದಲ್ಲಿ ತುಂತುರು ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.