ADVERTISEMENT

ಮರಗೋಡಿನಲ್ಲಿ ಮರಗಳ ಹನನ: ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಮೇ 2021, 3:35 IST
Last Updated 24 ಮೇ 2021, 3:35 IST
ಮರಗೋಡು ಗ್ರಾಮದಲ್ಲಿ ಮರ ಕಡಿದಿರುವ ದೃಶ್ಯ (ಎಡಚಿತ್ರ). ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ದೃಶ್ಯ
ಮರಗೋಡು ಗ್ರಾಮದಲ್ಲಿ ಮರ ಕಡಿದಿರುವ ದೃಶ್ಯ (ಎಡಚಿತ್ರ). ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ದೃಶ್ಯ   

ಮಡಿಕೇರಿ: ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ಬೆಲೆಬಾಳುವ ಮರಗಳ ಹನನ ಮಾಡಿ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಡಗಿನಲ್ಲಿ‌ ಮರಗಳ್ಳರು ಲಾಕ್‌ಡೌನ್ ಸಮಯವನ್ನೇ ದುರುಪಯೋಗ ಮಾಡಿಕೊಂಡು ಈ ವೇಳೆ ಗ್ರಾಮದ ಕಾಫಿ ತೋಟ ಹಾಗೂ ಪೈಸಾರಿ (ಸರ್ಕಾರಿ ಜಾಗ) ಪ್ರದೇಶದಲ್ಲಿ ಬೆಳೆದಿದ್ದ ಮರಗಳನ್ನ ಕಡಿದು ಸಾಗಣೆ ಮಾಡಲಾಗಿದೆ. ಬೆಟ್ಟ ಪ್ರದೇಶದ ದಟ್ಟಾರಣ್ಯದಲ್ಲೂ ಮರಗಳ ಲೂಟಿ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಭಾರಿ ಬೆಲೆ ಬಾಳುವ ನಂದಿ ಮರಗಳಿಗೆ ಕೊಡಲಿ ಹಾಕಲಾಗಿದೆ. ಅರಣ್ಯ ಇಲಾಖೆಯುವರು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಚೆಟ್ಟಳ್ಳಿ ‌ಮೂಲದ ಮರದ ವ್ಯಾಪಾರಿಯಿಂದ ಈ ಮರ ಹನನ ನಡೆದಿದೆ. ಪೈಸಾರಿ ಜಾಗ ಆಗಿದ್ದು, ಇಲ್ಲಿನ‌ ಮರ ಕಡಿಯಲು ಅನುಮತಿ ಸಿಗುವುದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಶಾಮೀಲಿಂದ ಮರಗಳ ಹನನ ನಡೆದಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.