ADVERTISEMENT

ಕುಶಾಲನಗರ: ಸಾಯಿ ಬಡಾವಣೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 16:41 IST
Last Updated 24 ಜುಲೈ 2023, 16:41 IST
   

ಕುಶಾಲನಗರ: ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಪಟ್ಟಣದ ಸಾಯಿ‌ ಬಡಾವಣೆಗೆ ಸೋಮವಾರ ರಾತ್ರಿ ನೀರು ನುಗ್ಗಿದೆ. ಸಾಯಿ ದೇವಾಲಯದ ಆವರಣ ಜಲಾವೃತಗೊಂಡಿದ್ದು, ನಿವಾಸಿಗಳಲ್ಲಿ ಭೀತಿ ಆವರಿಸಿದೆ.

ನೀರು ಹೆಚ್ಚಾಗುವ ಸಾಧ್ಯತೆ ಇದ್ದು, ಮನೆಯ ಸಾಮಗ್ರಿಗಳನ್ನು ನಿವಾಸಿಗಳು ಚಾವಣಿಯ ಮೇಲೆ ಸಾಗಿಸಿಡುತ್ತಿದ್ದಾರೆ. ಸ್ವಯಂಸೇವಕರು ಸಹಕರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT