ADVERTISEMENT

ಖಾಸಗಿ ಪಿಂಚಣಿಗೆ ವಿರೋಧ: 3ನೇ ದಿನಕ್ಕೆ ಧರಣಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST
ಖಾಸಗಿ ಪಿಂಚಣಿಗೆ ವಿರೋಧ: 3ನೇ ದಿನಕ್ಕೆ ಧರಣಿ
ಖಾಸಗಿ ಪಿಂಚಣಿಗೆ ವಿರೋಧ: 3ನೇ ದಿನಕ್ಕೆ ಧರಣಿ   

ಕೋಲಾರ: ಖಾಸಗಿ ಪಿಂಚಣಿ ನೀತಿ ವಿರೋಧಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಮುಂದೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಶಾಖೆಯ ಸದಸ್ಯರು ನಡೆಸುತ್ತಿರುವ ಧರಣಿ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿತು.ಜನಸಮುದಾಯದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ನೌಕರರ ಹಿತರಕ್ಷಣೆಗಾಗಿ ಸರ್ಕಾರವೇ ಪಿಂಚಣಿ ಯೋಜನೆಯನ್ನು ರೂಪಿಸ ಜಾರಿಗೊಳಿಸಬೇಕು.
 

ಖಾಸಗಿ ಸಂಸ್ಥೆಗೆ ವಹಿಸಬಾರದು. ಪಿಂಚಣಿ ನಿಗದಿಯಾಗುವವರೆಗೂ ನೌಕರರನ್ನು ಕೆಲಸದಿಂದ ನಿವೃತ್ತಿಗೊಳಿಸಬಾರದು. ಪ್ರತಿಭಟನೆಯ ಹಕ್ಕನ್ನು ಮೊಟುಕುಗೊಳಿಸುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಕಾರ್ಯಕರ್ತೆಯರ ನೇಮಕಕ್ಕೆ ಮೊದಲು ವರ್ಗಾವಣೆಗೆ ಆದ್ಯತೆ ನೀಡಬೇಕು. ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮಾಸಿಕಸಭೆಗಳನ್ನು ನಡೆಸಬೇಕು. ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರರೆಂದು ಪರಿಗಣಿಸಬೇಕು.

ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ಮತ್ತು ಕಟ್ಟಡ ಬಾಡಿಗೆ ಹಣವನ್ನು ನೀಡಬೇಕು  ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಮುನಿರಾಜಮ್ಮ, ರಾಜಮ್ಮ, ಜಯಲಕ್ಷ್ಮಿ, ಮಂಜುಳಾ, ಬಿ.ಎಸ್.ನಾಗರತ್ನಮ್ಮ, ಅನಸೂಯಮ್ಮ, ಈಶ್ವರಮ್ಮ, ರಾಜಮ್ಮ, ಜಯಮ್ಮ, ವಿಶಾಲಾಕ್ಷಿ ನೇತೃತ್ವ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.