ADVERTISEMENT

ಮದ್ದು, ಗುಂಡು ಸಂಗ್ರಹ: ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 8:55 IST
Last Updated 15 ಜೂನ್ 2013, 8:55 IST

ಮುಳಬಾಗಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಸಮೀಪ ಬಂಡೆ ಒಡೆಯಲು ಅಕ್ರಮವಾಗಿ ಸಂಗ್ರಹಿಸಿದ್ದ ಮದ್ದು ಗುಂಡುಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಸರ್ವೇ ನಂಬರ್ 199ರಲ್ಲಿ ವ್ಯಕ್ತಿಯೊಬ್ಬ ಬಂಡೆ ಸೀಳಲು ಬಳಸುತ್ತಿದ್ದ ಮದ್ದು ಗುಂಡಿನಿಂದ ಸುತ್ತಮುತ್ತಲ ಗ್ರಾಮಗಳ ವಾತಾವರಣಕ್ಕೆ ಧಕ್ಕೆಯಾಗಿತ್ತು. ಈ ಕುರಿತು ಬಂದ ದೂರಿನ ಮೇಲೆ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ ತಹಶೀಲ್ದಾರ್ ಡಿ.ವಿ.ರಾಮಮೂರ್ತಿ ತಿಳಿಸಿದ್ದಾರೆ.

ಇದೇ ವೇಳೆ  ಅಕ್ರಮ ಮರಳು ಫೀಲ್ಟರಿಂಗ್ ನಡೆಸುತ್ತಿದ್ದ ಐದು ಕೇಂದ್ರಗಳ ಮೇಲೆ ದಾಳಿ ನಡೆಸಿ, ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.