ADVERTISEMENT

ಬೈಕ್‌ನಲ್ಲಿದ್ದ ₹ 1.75 ಲಕ್ಷ ಕಳವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 5:04 IST
Last Updated 7 ಫೆಬ್ರುವರಿ 2023, 5:04 IST
ಬಂಗಾರಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಮಾತನಾಡಿದರು 
ಬಂಗಾರಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಮಾತನಾಡಿದರು    

ಕೆಜಿಎಫ್‌: ಬೈಕ್‌ನಲ್ಲಿದ್ದ ₹ 1.75 ಲಕ್ಷ ನಗದು ದೋಚಿರುವ ಘಟನೆ ಪಟ್ಟಣದ ಗೌತಮ ನಗರದಲ್ಲಿ ಸೋಮವಾರ ನಡೆದಿದೆ.

ರಾಜೂಬಾಯಿ ಎಂಬುವರು ಹಣ ಕಳೆದುಕೊಂಡವರು. ಖಾಸಗಿ ಕಂಪನಿಯ ಉದ್ಯೋಗಿಯಾದ ಅವರು ಮಧ್ಯಾಹ್ನ ಬ್ಯಾಂಕ್‌ಗೆ ಹೋಗಿ ಹಣ ಡ್ರಾ ಮಾಡಿದ್ದಾರೆ. ಅದನ್ನು ಸ್ಕೂಟರ್ ಸೀಟಿನ ಕೆಳಗೆ ಇಟ್ಟುಕೊಂಡು ಗೌತಮ ನಗರಕ್ಕೆ ಬಂದಿದ್ದಾರೆ. ಬೈಕ್‌ ಅನ್ನು ಹೊರಗೆ ನಿಲ್ಲಿಗೆ ಮನೆಯ ಒಳಗೆ ಹೋಗಿ ಬರುವಷ್ಟರಲ್ಲಿ ಹಣ ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಬರ್ಟಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.