ADVERTISEMENT

ಮುಳಬಾಗಿಲು: ಯುವಕನಿಂದ ಜಿಂಕೆಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 13:10 IST
Last Updated 4 ಜುಲೈ 2023, 13:10 IST
ರಸ್ತೆ ಅಪಘಾತದಲ್ಲಿ ತೀವ್ರವಾದ ಗಾಯಗಳಿಂದ ಗಿಡಗಳಲ್ಲಿ ಬಿದ್ದಿರುವ ಜಿಂಕೆ
ರಸ್ತೆ ಅಪಘಾತದಲ್ಲಿ ತೀವ್ರವಾದ ಗಾಯಗಳಿಂದ ಗಿಡಗಳಲ್ಲಿ ಬಿದ್ದಿರುವ ಜಿಂಕೆ   

ಮುಳಬಾಗಿಲು: ಅಪಘಾತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಜಿಂಕೆಯೊಂದನ್ನು ಬೂಡಿದೇರು ಗ್ರಾಮದ ಯುವ ಸೋಮಶೇಖರ್ ರಕ್ಷಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ತಾಲ್ಲೂಕಿನ ಬೈರಕೂರಿನಿಂದ ಆಂಧ್ರಪ್ರದೇಶದ ಪುಂಗನೂರಿಗೆ ಹೋಗುವ ಮಾರ್ಗದ ಬೂಡಿದೇರು ಮತ್ತು ಕಿರುಮಣಿ ಮಿಟ್ಟೆಯ ಮಧ್ಯದಲ್ಲಿ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ಜಿಂಕೆ ರಸ್ತೆಯ ಪಕ್ಕದಲ್ಲಿ ಬಿದ್ದು ರಕ್ತ ಸ್ರಾವವಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸೋಮಶೇಖರ್ ಕೂಡಲೇ ಬೈರಕೂರು ಪಶು ವೈದ್ಯ ರಾಮಚಂದ್ರಪ್ಪ ಅವರಿಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸಿ ನಂತರ ಅರಣ್ಯ ಅಧಿಕಾರಿ ಜ್ಯೋತಿ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT