ADVERTISEMENT

ಕೆಜಿಎಫ್‌: ಅಪಘಾತದಲ್ಲಿ ಜಿಂಕೆ ಸಾವು.

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 11:17 IST
Last Updated 17 ಏಪ್ರಿಲ್ 2019, 11:17 IST
ಕೆಜಿಎಫ್‌ ಕೋರಮಂಡಲ್‌ನಲ್ಲಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದ ಜಿಂಕೆಗೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಕೆಜಿಎಫ್‌ ಕೋರಮಂಡಲ್‌ನಲ್ಲಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದ ಜಿಂಕೆಗೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.   

ಕೆಜಿಎಫ್‌: ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದು ಜಿಂಕೆ ಮೃತಪಟ್ಟು, ಮತ್ತೊಂದು ಜಿಂಕೆ ಗಾಯಗೊಂಡಿದೆ.

ಮಾರಿಕುಪ್ಪಂ ಬಳಿಯ ಕೊಡಿಗೇನಹಳ್ಳಿ ಬಳಿ ರಾತ್ರಿ ಬೈಕ್‌ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ನಾರಾಯಣಸ್ವಾಮಿ ಎಂಬಾತ ದಾರಿಗೆ ಅಡ್ಡ ಬಂದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿದೆ. ಮಾರಿಕುಪ್ಪಂ ಪೊಲೀಸರು ಆರೋಪಿ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೋರಮಂಡಲ್‌ನ ಡಾ.ಅಂಬೇಡ್ಕರ್ ಶಾಲೆಯ ಬಳಿ ಅಪಘಾತಕ್ಕೆ ಒಳಗಾದ ಗಂಡು ಜಿಂಕೆ ಶಾಲೆಯ ಹೊರವಲಯದಲ್ಲಿ ನರಳುತ್ತಾ ಬಿದ್ದಿತ್ತು. ಅದನ್ನು ಗಮನಿಸಿದ ನಿವಾಸಿಗಳು ಬೆಮಲ್ ನಗರದ ಸ್ನೇಕ್ ರಾಜ ಅವರನ್ನು ಕರೆಸಿಕೊಂಡರು. ನಂತರ ಗಾಯಗೊಂಡ ಜಿಂಕೆಗೆ ರಾಬರ್ಟಸನ್‌ಪೇಟೆಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಜಿಂಕೆಯನ್ನು ಕರೆದೊಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.