ADVERTISEMENT

ಯುವಕನ ಮೇಲೆ ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:14 IST
Last Updated 13 ಮೇ 2022, 2:14 IST

ಪ್ರಜಾವಾಣಿ ವಾರ್ತೆ

ಕೆಜಿಎಫ್: ಬಾರ್‌ನಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಯುವಕನ ಮೇಲೆ ರೇಜರ್‌ನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಗಣೇಶ್ ಪುರುಂನಲ್ಲಿ ನಡೆದಿದೆ.

ಈಚೆಗೆ ಪಾರಾಂಡಹಳ್ಳಿಯ ಬಾರ್‌ನಲ್ಲಿ ಮಹೇಶ್ ಮತ್ತು ವಿನೀತ್ ಎಂಬುವರ ನಡುವೆ ಬೈಕ್‌ ಹೊರ ತೆಗೆಯುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ನಂತರ ಗಣೇಶ್ ಪುರಂನಲ್ಲಿ ಮಹೇಶ್‌ನನ್ನು ನೋಡಿದ ವಿನೀತ್, ನನ್ನ ಮೇಲೆ ಅವಾಜ್ ಹಾಕುತ್ತೀಯ ಎಂದು ಕೋಪಗೊಂಡು ರೇಜರ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಾಯಗೊಂಡ ಮಹೇಶ್‌ಗೆ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಬರ್ಟಸನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.