ADVERTISEMENT

ಕೆಜಿಎಫ್‌ | ಎಕ್ಸ್‌ಪ್ರೆಸ್‌ ಟೋಲ್‌ ಬಳಿ ಅಪಘಾತ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:16 IST
Last Updated 9 ಜೂನ್ 2025, 16:16 IST
ಕೆಜಿಎಫ್‌ನ ಬೆಮಲ್‌ ನಗರದ ಟೋಲ್‌ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು
ಕೆಜಿಎಫ್‌ನ ಬೆಮಲ್‌ ನಗರದ ಟೋಲ್‌ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು   

ಕೆಜಿಎಫ್‌: ಇಲ್ಲಿನ ಬೆಮಲ್‌ ನಗರದ ಬಳಿ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ ಟೋಲ್‌ ಬಳಿ ಸೋಮವಾರ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಅತಿವೇಗವಾಗಿ ಬರುತ್ತಿದ್ದ ಕಾರು ಬೇತಮಂಗಲ ರಸ್ತೆಯ ಕೂಡು ಜಾಗದಲ್ಲಿ ನಿಯಂತ್ರಣ ತಪ್ಪಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಚಾಲನೆ ಮಾಡುತ್ತಿದ್ದ ಬೆಮಲ್‌ ಎಚ್‌ಪಿ ನಗರ ನಿವಾಸಿ ಜಾನ್‌ ಬೇಕಲ್‌ (30), ಕೃಷ್ಣಾವರಂ ನಿವಾಸಿ ನಾಗರಾಜ್‌ (50) ಮತ್ತು ಸೇನೆಯ ಆರ್ಟಿಲರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್‌ (34) ಮೃತಪಟ್ಟವರು. ಗಾಯಗೊಂಡಿರುವ ಡಿ.ಕೆ. ಹಳ್ಳಿ ಪ್ಲಾಂಟೇಷನ್‌ ನಿವಾಸಿ ತಮಿಳರಸನ್‌ ಮತ್ತು ಕೃಷ್ಣಾವರಂ ನಿವಾಸಿ ರಾಜ್‌ಕುಮಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬೆಮಲ್‌ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.