ADVERTISEMENT

ಶನಿವಾರ 229 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:50 IST
Last Updated 19 ಸೆಪ್ಟೆಂಬರ್ 2020, 16:50 IST

ತುಮಕೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 229 ಮಂದಿ ಗುಣಮುಖರಾಗಿ ಶನಿವಾರ ಮನೆಗಳಿಗೆ ಮರಳಿದರು.

ಮತ್ತೆ 284 ಮಂದಿಗೆ ಸೋಂಕು ತಗುಲಿದ್ದು ಇಬ್ಬರು ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕು ಭೋವಿಪಾಳ್ಯದ 62 ವರ್ಷದ ಪುರುಷ ಹಾಗೂ ಕೊಟ್ಟನಹಳ್ಳಿ ಗ್ರಾಮದ 75 ವರ್ಷದ ಪುರುಷ ಮೃತಪಟ್ಟಿದ್ದಾರೆ.

ತುಮಕೂರು ತಾಲ್ಲೂಕಿನಲ್ಲಿ 86, ಚಿಕ್ಕನಾಯಕನಹಳ್ಳಿ 19, ಗುಬ್ಬಿ 14, ಕೊರಟಗೆರೆ 6, ಕುಣಿಗಲ್ 12, ಮಧುಗಿರಿ 13, ಪಾವಗಡ 44, ಶಿರಾ 36, ತಿಪಟೂರು 34 ಮತ್ತು ತುರುವೇಕೆರೆ ತಾಲ್ಲೂಕಿನ 20 ಮಂದಿಗೆ ಸೋಂಕು ದೃಢವಾಗಿದೆ.

ADVERTISEMENT

ಈವರೆಗೆ ಜಿಲ್ಲೆಯಲ್ಲಿ 245 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು 10,721 ಮಂದಿಗೆ ಸೋಂಕು ತಗುಲಿದೆ. ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 6,954 ಮತ್ತು ದ್ವಿತೀಯ ಸಂಪರ್ಕಿತ
10,139 ಮಂದಿಯ ಮೇಲೆ ನಿಗಾ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.