ಕೆಜಿಎಫ್: ನಗರ ಮತ್ತು ಹೊರವಲಯದಲ್ಲಿ ಭಾನುವಾರ ಸಂಜೆ ಚದುರಿದಂತೆ ಭಾರಿ ಮಳೆ ಬಿದ್ದಿದ್ದು, ರಸ್ತೆ ಮೇಲೆ ನೀರು ಹರಿಯಿತು.
ಒಂದೇ ಸಮನೆ ಸುರಿದ ಮಳೆಯಿಂದಾಗಿ ಸಣ್ಣಪುಟ್ಟ ಕುಂಟೆಗಳು ತುಂಬಿ ಹರಿದಿವೆ. ಕೆರೆಗಳಿಗೆ ನೀರು ಹರಿದುಬರಲು ಶುರುವಾಗಿದೆ. ನಗರದಲ್ಲಿ ಚರಂಡಿಗಳಿಂದ ನೀರು ಉಕ್ಕಿ ಹರಿದು ತಗ್ಗು ಪ್ರದೇಶದ ಮನೆಗಳ ನಿವಾಸಿಗಳಿಗೆ ಭೀತಿಯ ವಾತಾವರಣ ಉಂಟು ಮಾಡಿದೆ.
ಊರಿಗಾಂಪೇಟೆಯ ಬೃಹತ್ ರಾಜಕಾಲುವೆಗೆ ನೀರು ಹರಿದುಹೋಗುತ್ತಿದೆ. ಸುತ್ತ ಮುತ್ತ ಇರುವ ಓಣಿಗಳ ಮನೆಗಳಲ್ಲಿ ನೀರು ಸಂಗ್ರಹವಾಗಿದೆ. ನಷ್ಟದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.