ADVERTISEMENT

ಜನತಾ ಕರ್ಫ್ಯೂ: ಕೋಲಾರದಲ್ಲಿ ಊಟ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:20 IST
Last Updated 22 ಮಾರ್ಚ್ 2020, 13:20 IST
ಕೋಲಾರದಲ್ಲಿ ಕೊರೋನಾ ತಡೆಗಾಗಿ ನೀಡಲಾಗಿದ್ದ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಹೋಟೆಲ್‌ಗಳಿಲ್ಲದೇ ಪರದಾಡುತ್ತಿದ್ದ ಚಿಂದಿ ಹಾಯುವ ಮತ್ತು ನರ‍್ವಸತಿಯಿಂದ ರಸ್ತೆ ಬದಿ ಜೀವನ ನಡೆಸುವವರಿಗೆ ಕೆ.ಆರ್.ಧನರಾಜ್ ಹಾಗೂ ಶಾಂತಕುಮಾರಿ ಭಾನುವಾರ ಊಟ ವಿತರಿಸಿದರು.
ಕೋಲಾರದಲ್ಲಿ ಕೊರೋನಾ ತಡೆಗಾಗಿ ನೀಡಲಾಗಿದ್ದ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಹೋಟೆಲ್‌ಗಳಿಲ್ಲದೇ ಪರದಾಡುತ್ತಿದ್ದ ಚಿಂದಿ ಹಾಯುವ ಮತ್ತು ನರ‍್ವಸತಿಯಿಂದ ರಸ್ತೆ ಬದಿ ಜೀವನ ನಡೆಸುವವರಿಗೆ ಕೆ.ಆರ್.ಧನರಾಜ್ ಹಾಗೂ ಶಾಂತಕುಮಾರಿ ಭಾನುವಾರ ಊಟ ವಿತರಿಸಿದರು.   

ಕೋಲಾರ: ಕೊರೋನಾ ಸೋಂಕು ತಡೆಗಾಗಿ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂದಿಂದಾಗಿ ಹೋಟೆಲ್‌ಗಳು ಬಂದ್ ಆಗಿದ್ದು, ಊಟವಿಲ್ಲದೇ ಪರದಾಡುತ್ತಿದ್ದ ಅನಾಥರು, ಅಲೆಮಾರಿಗಳಿಗೆ ‘ಮುಸ್ಸಂಜೆ ಮನೆ’ಯ ಸದಸ್ಯರು ವತಿಯಿಂದ ಊಟ ವಿತರಿಸುವ ಮೂಲಕ ಮಾನವೀಯತೆ ಮೆರೆದರು.

ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಹಾಗೂ ಮುಸ್ಸಂಜೆ ಮನೆಯ ಮುಖ್ಯಸ್ಥೆ ಶಾಂತಕುಮಾರಿ ಸಾಮಾಜಿಕ ಕಳಕಳಿಯೊಂದಿಗೆ ನಗರಾದ್ಯಂತ ಚಿಂದಿ ಹಾಯುತ್ತಾ ಜೀವನ ಸಾಗಿಸುವ ಅನಾಥರು, ವಸತಿ ಹೀನರನ್ನು ಹುಡುಕಿ ಊಟದ ಪೊಟ್ಟಣಗಳನ್ನು ವಿತರಿಸಿದರು.

ಅಂಗಡಿಮುಗಟ್ಟುಗಳು, ಹೋಟೆಲ್‌ಗಳು ಬಂದ್ ಆಗಿರುವುದರಿಂದ ಚಿಂದಿ ಹಾದು ರಸ್ತೆ ಬದಿಯೇ ಮಲಗಿ ಜೀವನ ನಡೆಸುವ ಅನೇಕರು ಇಂದು ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡ ಕೆ.ಆರ್.ಧನರಾಜ್ ಹಾಗೂ ಶಾಂತಕುಮಾರಿ ಅವರು ಸ್ವತಃ ಅಡುಗೆ ಮಾಡಿ ಊಟದ ಪೊಟ್ಟಣಗಳನ್ನು ಸಿದವರಿಗೆ ವಿತರಿಸಿ ಮಾನವೀಯತೆ ಮೆರೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.