ADVERTISEMENT

ಬಂಗಾರಪೇಟೆ: ಜಮೀನು ದಾಖಲೆ ನೀಡಲು ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 2:41 IST
Last Updated 6 ನವೆಂಬರ್ 2020, 2:41 IST

ಬಂಗಾರಪೇಟೆ: ತಾಲ್ಲೂಕು ಆಡಳಿತ ಮಂಜೂರು ಮಾಡಿರುವ ತಳಾರಿ ನೌಕರಿ ಇನಾಂತಿ ಜಮೀನಿನ ದಾಖಲೆ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ತಾಲ್ಲೂಕಿನ ಕಸಬಾ ಹೋಬಳಿ ಮುಗಿಲಬೆಲೆ ಗ್ರಾಮದ ದೊಡ್ಡಕೃಷ್ಣಪ್ಪ ಮತ್ತು ರಾಮಕೃಷ್ಣಪ್ಪ
ದೂರಿದ್ದಾರೆ.

ಈ ಸಂಬಂಧ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಪಿಂಚಣಿ ಹಾಗೂ ಕಂದಾಯ ಅದಾಲತ್‌ನಲ್ಲಿ ಅವರುಉಪ ವಿಭಾಗಾಧಿಕಾರಿ ವಿ. ಸೋಮಶೇಖರ್‌ ಅವರಿಗೆ ಮನವಿಸಲ್ಲಿಸಿದರು.

‘ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಕೆ. ಚಂದ್ರಮೌಳೇಶ್ವರ ನಮಗೆ ಜಮೀನು ಮಂಜೂರು ಮಾಡಿದ್ದರು. ಅವರ ಕೊಲೆಯಾದ ಬಳಿಕ ಬಂಗಾರಪೇಟೆ ತಹಶೀಲ್ದಾರ್ ಆಗಿ ಪ್ರಭಾರವಹಿಸಿಕೊಂಡಿದ್ದ ಕೆಜಿಎಫ್ ತಹಶೀಲ್ದಾರ್ ಕೆ. ರಮೇಶ್ ಅವರು ಹಿಂದಿನ ತಹಶೀಲ್ದಾರ್ ಆದೇಶದಂತೆ ಪಹಣಿಯಲ್ಲಿ ಹೆಸರು ನಮೂದಿಸಿ ಎಂದು ಆದೇಶ ಮಾಡಿದ್ದರು. ಕೂಡಲೇ ದಾಖಲೆ ಪತ್ರ ನೀಡಬೇಕು ಎಂದು ಕೋರಿದರು.

ADVERTISEMENT

ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ಅವರು, ದಾಖಲೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ದಯಾನಂದ್ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.