ADVERTISEMENT

ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:56 IST
Last Updated 27 ಸೆಪ್ಟೆಂಬರ್ 2021, 5:56 IST
ಮುಳಬಾಗಿಲು ತಾಲ್ಲೂಕು ಆವಣಿ ಗ್ರಾಮದಲ್ಲಿ ಶನಿವಾರ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಎಚ್. ನಾಗೇಶ್. ತಾ.ಪಂ. ಮಾಜಿ ಅಧ್ಯಕ್ಷ ಡಾ.ಎ.ವಿ. ಶ್ರೀನಿವಾಸ್, ಆವಣಿ ವಿಜಯ್‌ಕುಮಾರ್, ಮಂಡಿಕಲ್ ಚಲಪತಿ, ಪಿ.ಎಂ. ಕೃಷ್ಣಮೂರ್ತಿ, ಪೆದ್ದಪ್ಪಯ್ಯ, ಬೈರಪ್ಪ ಹಾಜರಿದ್ದರು
ಮುಳಬಾಗಿಲು ತಾಲ್ಲೂಕು ಆವಣಿ ಗ್ರಾಮದಲ್ಲಿ ಶನಿವಾರ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಎಚ್. ನಾಗೇಶ್. ತಾ.ಪಂ. ಮಾಜಿ ಅಧ್ಯಕ್ಷ ಡಾ.ಎ.ವಿ. ಶ್ರೀನಿವಾಸ್, ಆವಣಿ ವಿಜಯ್‌ಕುಮಾರ್, ಮಂಡಿಕಲ್ ಚಲಪತಿ, ಪಿ.ಎಂ. ಕೃಷ್ಣಮೂರ್ತಿ, ಪೆದ್ದಪ್ಪಯ್ಯ, ಬೈರಪ್ಪ ಹಾಜರಿದ್ದರು   

ಮುಳಬಾಗಿಲು: ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಮೂಲಕ ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಎಚ್. ನಾಗೇಶ್ ತಿಳಿಸಿದರು.

ತಾಲ್ಲೂಕು ಕೇಂದ್ರವಾದ ಅವಣಿ ಗ್ರಾಮದಲ್ಲಿ ಶನಿವಾರ ₹ 15 ಲಕ್ಷ ವೆಚ್ಚದ ಸಿ.ಸಿ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ, ಹೈಮಾಸ್ಟ್‌ ದೀಪ ಸೇರಿದಂತೆ ₹ 53 ಲಕ್ಷ ವೆಚ್ಚದ ಶಾಲಾ ಕೊಠಡಿ ಉದ್ಫಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ಪರಿಶಿಷ್ಟರ ಕಾಲೊನಿಯ ಪ್ರಮುಖ ರಸ್ತೆ, ನೀರಿನ ಶುದ್ಧೀಕರಣ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದರು.

ADVERTISEMENT

ಸಂಸದ ಎಸ್. ಮುನಿಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಡಾ.ಎ.ವಿ. ಶ್ರೀನಿವಾಸ್, ಯುವ ಮುಖಂಡ ಆವಣಿ ವಿಜಯ್‌ಕುಮಾರ್, ಮಂಡಿಕಲ್ ಚಲಪತಿ, ಪಿ.ಎಂ. ಕೃಷ್ಣಮೂರ್ತಿ, ಪೆದ್ದಪ್ಪಯ್ಯ, ಬೈರಪ್ಪ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.