ಕೆಜಿಎಫ್: ಅಂಗಡಿಗೆ ಕನ್ನ ಕೊರೆದು ಮದ್ಯವನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಆಂಡರ್ಸನ್ಪೇಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸೂಸೈಪಾಳ್ಯದ ಅರುಳ್ ಮತ್ತು ದೊಡ್ಡಿಯ ಸಿಕಂದರ್ ₹90 ಸಾವಿರ ಮೌಲ್ಯದ ವಿವಿಧ ಬ್ರಾಂಡ್ನ ಮದ್ಯದ ಬಾಟಲಿಗಳನ್ನು ಕದ್ದು ಒಯ್ದಿದ್ದರು. ಆರೋಪಿಗಳು ಕದ್ದ ಮದ್ಯವನ್ನು ಆಂಡರಸನ್ಪೇಟೆಯ ಶೌಚಾಲಯದಲ್ಲಿ ಬಚ್ಚಿಟ್ಟು ಗುಪ್ತವಾಗಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.