ADVERTISEMENT

ಕೋಲಾರ; 8 ಕೆ.ಜಿ ತೂಕದ ಉಡ ರಕ್ಷಣೆ!

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 5:31 IST
Last Updated 14 ಜುಲೈ 2023, 5:31 IST
ಉಡ ರಕ್ಷಣೆ
ಉಡ ರಕ್ಷಣೆ   

ಕೋಲಾರ: ನಗರದ ಕಾರಂಜಿಕಟ್ಟೆಯ ದ್ರೌಪತಾಂಭ ಕರಗ ದೇವಸ್ಥಾನದ ಹಿಂದಿರುವ ರಘು ಎಂಬುವರು ಮನೆಯೊಂದರ ಆವರಣದಲ್ಲಿ ಸುಮಾರು 8 ಕೆ.ಜಿ ತೂಕದ ಉಡವೊಂದು ಕಾಣಿಸಿಕೊಂಡಿತು.

ಸ್ನೇಕ್ ರವಿ ಅವರು ಆ ಉಡವನ್ನು ರಕ್ಷಣೆ ಮಾಡಿ ಅಂತರಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬಿಟ್ಟರು. ಯಾರೋ ಉಡವನ್ನು ಮಾಂಸಕ್ಕಾಗಿ ತಂದಿಟ್ಟಿದ್ದು ಅದು ತಪ್ಪಿಸಿಕೊಂಡು ಬಂದಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಅಂತರಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಕಾಡುಹಂದಿ, ನವಿಲು, ಮೊಲ ಸೇರಿದಂತೆ ಚಿಕ್ಕ ಪ್ರಾಣಿಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಸ್ನೇಕ್ ರವಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.