ADVERTISEMENT

‘ದೇಶಕ್ಕಾಗಿ ಎಲ್ಲಾ ಭಾಷಿಕರು ಒಂದೇ’

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:36 IST
Last Updated 23 ನವೆಂಬರ್ 2020, 4:36 IST
ಕೆಜಿಎಫ್ ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಶನಿವಾರ ನಡೆದ ಭಾಷಾ ಸೌಹಾರ್ದ ದಿನಾಚರಣೆಯಲ್ಲಿ ನ್ಯಾಯಾಧೀಶ ದಯಾನಂದ ಹಿರೇಮಠ ಮಾತನಾಡಿದರು
ಕೆಜಿಎಫ್ ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಶನಿವಾರ ನಡೆದ ಭಾಷಾ ಸೌಹಾರ್ದ ದಿನಾಚರಣೆಯಲ್ಲಿ ನ್ಯಾಯಾಧೀಶ ದಯಾನಂದ ಹಿರೇಮಠ ಮಾತನಾಡಿದರು   

ಕೆಜಿಎಫ್‌: ‘ಮಾತೃಭಾಷೆಯನ್ನು ಪ್ರೇಮಿಸುತ್ತಿದ್ದರೂ, ದೇಶದ ವಿಷಯ ಬಂದಾಗ ಎಲ್ಲಾ ಭಾಷಿಕರು ಒಂದೇ ಎನ್ನುವ ಭಾವನೆಯನ್ನು ಭಾರತೀಯರು ಹೊಂದಿದ್ದಾರೆ. ಇದು ವಿವಿಧತೆಯಲ್ಲಿ ಏಕತೆಯ ದ್ಯೋತಕ’ ಎಂದು ನ್ಯಾಯಾಧೀಶ ದಯಾನಂದ ಹಿರೇಮಠ ಹೇಳಿದರು.

ರಾಬರ್ಟಸನ್‌ಪೇಟೆಯ ವಿವೇಕಾನಂದ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಏಕತಾ ದಿನಾಚರಣೆ ಮತ್ತು ಭಾಷಾ ಸೌಹಾರ್ದ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಜಿಎಫ್ ನಗರದಲ್ಲಿ ವಿವಿಧ ಭಾಷೆ ಮಾತನಾಡುವ ಜನ ಹೆಚ್ಚಾಗಿದ್ದಾರೆ. ಆದರೆ ಎಲ್ಲರೂ ಅಣ್ಣ, ತಮ್ಮಂದಿರ ರೀತಿಯಲ್ಲಿ ಬಾಳ್ವೆ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ. ಭಾಷೆ ಮತ್ತು ದೇಶದ ಬಗ್ಗೆ ನಾವು ತೋರುತ್ತಿರುವ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ADVERTISEMENT

ನ್ಯಾಯಾಧೀಶೆ ಎಂ.ಡಿ. ರೂಪಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್,ಕನ್ನಡ ಸಂಘ, ತಮಿಳು ಸಂಘ ಮತ್ತು ಮಲಯಾಳಿ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.