ADVERTISEMENT

ಆಲಿಕಲ್ಲು ಮಳೆ; ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 8:40 IST
Last Updated 10 ಜುಲೈ 2020, 8:40 IST
ಗಾಲಿ ಮತ್ತು ಆಲಿಕಲ್ಲು ಮಳೆಗೆ ಸುನುಪಕುಂಟೆಯ ರವಿಕುಮಾರ್ ಎಂಬುವರ ತೋಟ ನಾಶವಾಗಿದೆ
ಗಾಲಿ ಮತ್ತು ಆಲಿಕಲ್ಲು ಮಳೆಗೆ ಸುನುಪಕುಂಟೆಯ ರವಿಕುಮಾರ್ ಎಂಬುವರ ತೋಟ ನಾಶವಾಗಿದೆ   

ನಂಗಲಿ: ಬುಧವಾರ ರಾತ್ರಿ ಸುರಿದ ಗಾಳಿ ಮತ್ತು ಆಲಿಕಲ್ಲು ಮಳೆಗೆ ನೂರಾರು ಎಕರೆಗಳಷ್ಟು ಟೊಮೆಟೊ, ನೆಲಗಡಲೆ ಹಾಗೂ ಬೀನ್ಸ್ ತೋಟಗಳು ನಾಶವಾಗಿವೆ.

ಬುಧವಾರ ಸಂಜೆಯಿಂದಲೇ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯುತು. ಭಾರೀ ಗಾಳಿ ಹಾಗೂ ದೊಡ್ಡ ಗಾತ್ರದ ಆಲಿಕಲ್ಲು ಸಮೇತ ಮಳೆ ಬಿದ್ದಿದ್ದರಿಂದ ಇಲ್ಲಿನ ಸುನುಪಕುಂಟೆ, ಎಂ.ಚಮಕಲಹಳ್ಳಿ, ಕರಡಿಗಾನಹಳ್ಳಿ, ಪೆದ್ದೂರು, ಪುಣ್ಯಹಳ್ಳಿ, ಕೋಡಿಹಳ್ಳಿ, ಕಾಡೇನಹಳ್ಳಿ ಮುಂತಾದ ಗ್ರಾಮಗಳ ರೈತರು ಬೆಳೆದಿದ್ದ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿದೆ.

ದಪ್ಪ ಆಲಿಕಲ್ಲುಗಳು ಬಿದ್ದು, ಗಾಳಿಯೂ ರಭಸವಾಗಿ ಬೀಸಿದ ಪರಿಣಾಮ ನೆಲಗಡಲೆಯ ಎಲೆಗಳು ಉದುರಿವೆ.

ADVERTISEMENT

ತಹಶಿಲ್ದಾರ್ ಕೆ.ಎನ್.ರಾಜಶೇಖರ್, ತೋಟಗಾರಿಕೆ ಇಲಾಖೆ ನಿರ್ದೇಶಕಿ ಶಿವಕುಮಾರಿ, ಕಂದಾಯ ನಿರೀಕ್ಷಕ ಉಮೇಶ್, ಗ್ರಾಮ ಲೆಕ್ಕಾಧಿಕಾರಿ ನರೇಶ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.