ADVERTISEMENT

ಭಾರಿ ಮಳೆ: ಬತ್ತಿ ಹೋಗಿದ್ದ ಕೆರೆಗಳಿಗೆ ಮರು ಜೀವ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 14:10 IST
Last Updated 8 ಜೂನ್ 2024, 14:10 IST
ಬತ್ತಿ ಹೋಗಿದ್ದ ಕೆಂಚುಗಾರನ ಕೆರೆ ಮಳೆಯಿಂದ ನೀರು ತುಂಬಿಕೊಂಡಿರುವುದು
ಬತ್ತಿ ಹೋಗಿದ್ದ ಕೆಂಚುಗಾರನ ಕೆರೆ ಮಳೆಯಿಂದ ನೀರು ತುಂಬಿಕೊಂಡಿರುವುದು   

ಟೇಕಲ್: ಹೋಬಳಿ ಸೇರಿದಂತೆ ವಿವಿಧೆಡೆ ಗುರುವಾರ ರಾತ್ರಿ ಸುರಿದ ಮಳೆಗೆ ಟೇಕಲ್ ಹೋಬಳಿಯಲ್ಲಿ ಬತ್ತಿ ಹೋಗಿದ್ದ ಕೆರೆಗಳಿಗೆ ಮರು ಜೀವ ಬಂದಂತಾಗಿದೆ.

ಮೂರು ತಿಂಗಳ ಹಿಂದೆ ದನ ಕರುಗಳಿಗೆ ನೀರಿಲ್ಲದೆ ಬತ್ತಿ ಹೋಗಿದ್ದ ಕೆರೆಗಳಿಂದ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‌ಗಳು ನಿಂತು ಹೋಗಿದ್ದವು. ಇದರಿಂದ ರೈತರು ಕಂಗಲಾಗಿದ್ದು, ಮಳೆಗಾಗಿ ಕಾದು ಕುಳಿತಿದ್ದರು. 

ಒಂದು ವಾರದಿಂದ ಸುರಿದ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.