ADVERTISEMENT

ಕೋಲಾರಕ್ಕೆ ಸತ್ಯಭಾಮ ನೂತನ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 15:34 IST
Last Updated 7 ಮಾರ್ಚ್ 2020, 15:34 IST
ಸಿ.ಸತ್ಯಭಾಮ
ಸಿ.ಸತ್ಯಭಾಮ   

ಕೋಲಾರ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಸಿ.ಸತ್ಯಭಾಮ ಅವರನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಸದ್ಯ ತರಬೇತಿಗಾಗಿ ಉತ್ತರಖಂಡದ ಮಸ್ಸೂರಿಗೆ ತೆರಳಿರುವ ಮಂಜುನಾಥ್‌ ಅವರಿಗೆ ಸರ್ಕಾರ ಯಾವುದೇ ಹುದ್ದೆ ತೋರಿಸಿಲ್ಲ. 2018ರ ಆ.1ರಂದು ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದ ಮಂಜುನಾಥ್‌ ಒಂದು ತಿಂಗಳ ತರಬೇತಿಗಾಗಿ ಫೆ.17ರಂದು ಮಸ್ಸೂರಿಗೆ ತೆರಳಿದ್ದರು.

ಇದಕ್ಕೂ ಮುನ್ನವೇ ಸರ್ಕಾರ ಫೆ.15ರಂದು ಮಂಜುನಾಥ್‌ರ ಸ್ಥಾನಕ್ಕೆ ಸತ್ಯಭಾಮ ಅವರನ್ನು ವರ್ಗಾವಣೆ ಮಾಡಿತ್ತು. ನಂತರ ವರ್ಗಾವಣೆ ಆದೇಶ ತಡೆಹಿಡಿದು ಮಂಜುನಾಥ್‌ ಅವರನ್ನೇ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದುವರಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶ ಪರಿಷ್ಕರಿಸಿರುವ ಸರ್ಕಾರ ಸತ್ಯಭಾಮ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಿದೆ.

ADVERTISEMENT

ಸದ್ಯ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಸತ್ಯಭಾಮ ಅವರು ಸೋಮವಾರ (ಮಾರ್ಚ್‌ 9) ಜಿಲ್ಲಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.