ADVERTISEMENT

ಅನಧಿಕೃತ ವಿದ್ಯುತ್‌ ಸಂಪರ್ಕ: ದಾಳಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:42 IST
Last Updated 20 ನವೆಂಬರ್ 2019, 16:42 IST
ಬೆಸ್ಕಾಂ ಜಾಗೃತ ದಳ ಸಿಬ್ಬಂದಿಯು ಕೋಲಾರದ ವಿವಿಧೆಡೆ ಬುಧವಾರ ಅನಧಿಕೃತ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರು.
ಬೆಸ್ಕಾಂ ಜಾಗೃತ ದಳ ಸಿಬ್ಬಂದಿಯು ಕೋಲಾರದ ವಿವಿಧೆಡೆ ಬುಧವಾರ ಅನಧಿಕೃತ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರು.   

ಕೋಲಾರ: ನಗರದ ವಿವಿಧೆಡೆ ಬುಧವಾರ ವಿಶೇಷ ಕಾರ್ಯಾಚರಣೆ ನಡೆದ ಬೆಸ್ಕಾಂ ಜಾಗೃತ ದಳ ಸಿಬ್ಬಂದಿಯು ಅನಧಿಕೃತ ವಿದ್ಯುತ್‌ ಸಂಪರ್ಕ ಪಡೆದಿದ್ದ ಸಂಬಂಧ 14 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹ 28 ಲಕ್ಷ ದಂಡ ವಿಧಿಸಿದ್ದಾರೆ.

ಬೆಸ್ಕಾಂ ಜಾಗೃತ ದಳ ಎಸ್ಪಿ ಕುಮಾರಸ್ವಾಮಿ ಆದೇಶದ ಅನ್ವಯ ಅಧಿಕಾರಿಗಳು ತಂಡ ವಿಶೇಷ ತಂಡ ರಚಿಸಿಕೊಂಡು ವಿವಿಧ ಬಡಾವಣೆಗಳಲ್ಲಿ ದಿಢೀರ್‌ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದವರಿಗೆ ಬಿಸಿ ಮುಟ್ಟಿಸಿದರು.

ನಗರದ ಗಾಂಧಿನಗರ, ಕೊಂಡರಾಜನಹಳ್ಳಿಯಲ್ಲಿ ಕೊಳವೆ ಬಾವಿಗಳಿಗೆ, ಸಂಪ್‌ಗಳ ಪಂಪ್‌ ಮತ್ತು ಮೋಟರ್‌ಗಳಿಗೆ ನಿಯಮಬಾಹಿರವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವುದು ಅಧಿಕಾರಿಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ. ಕೃಷಿ ಉದ್ದೇಶಕ್ಕಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದ ಹಲವರು ವಾಣಿಜ್ಯ ಉದ್ದೇಶದ ಕೊಳವೆ ಬಾವಿಗಳಿಗೆ ವಿದ್ಯುತ್‌ ಬಳಸಿಕೊಂಡು ನೀರು ಮಾರಾಟ ಮಾಡುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ADVERTISEMENT

ಬೆಸ್ಕಾಂ ಜಾಗೃತ ದಳ ಡಿವೈಎಸ್ಪಿ ನಾಗರಾಜ್, ಕಾರ್ಯ ನಿರ್ವಾಹಕ ಎಂಜಿನಿಯರ್‌ ನರಹರಿ ಹಾಗೂ ಇನ್‌ಸ್ಪೆಕ್ಟರ್‌ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.