ADVERTISEMENT

ವಾರ್ತಾಧಿಕಾರಿ ನಿವೃತ್ತಿ; ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:45 IST
Last Updated 1 ಜೂನ್ 2011, 6:45 IST

ಕೊಪ್ಪಳ: ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಬಸವರಾಜ ಆಕಳವಾಡಿ ಅವರ ನಿವೃತ್ತ ಜೀವನ ಸುಖ-ಸಂತೋಷದಿಂದ ತುಂಬಿರಲಿ ಎಂದು ಹಾರೈಸಿದರು.

ನಂತರ, ಕೊಪ್ಪಳ ಮೀಡಿಯಾ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಆಕಳವಾಡಿ ಅವರು, ತಮ್ಮ 34 ವರ್ಷಗಳ ಸೇವಾವಧಿಯ ದಿನಗಳನ್ನು ನೆನಪಿಸಿಕೊಂಡರು.

ಪ್ರಭಾರ ವಾರ್ತಾಧಿಕಾರಿ ಬಿ.ವಿ.ತುಕಾರಾಂ, ಪತ್ರಕರ್ತರಾದ ಬಿ.ಎಸ್.ಪಾಟೀಲ, ಸೋಮರಡ್ಡಿ ಅಳವಂಡಿ, ಸಾದಿಕ್ ಅಲಿ, ಬಸವರಾಜ ಆಕಳವಾಡಿ ಪತ್ನಿ ಮಲ್ಲಿಕಾ ಆಕಳವಾಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪತ್ರಕರ್ತರಾದ ಶರಣಪ್ಪ ಬಾಚಲಾಪೂರ, ಸಂತೋಷ ದೇಶಪಾಂಡೆ, ಎನ್.ಎನ್.ಮೂರ್ತಿ ಪ್ಯಾಟಿ, ದೋಡ್ಡೇಶ ಎಲಿಗಾರ, ಶರಣು ಹಂಪಿ, ಗಂಗಾಧರ ಬಂಡಿಹಾಳ, ನಾಭಿರಾಜ, ಸಿದ್ದಪ್ಪ ಹಂಚಿನಾಳ, ಹನುಮಂತ ಹಳ್ಳಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.