ADVERTISEMENT

ಸಾರಾಯಿ ಮಾರಾಟ ನಿಷೇಧಿಸಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 7:55 IST
Last Updated 24 ಏಪ್ರಿಲ್ 2012, 7:55 IST

ಕೊಪ್ಪಳ: ಸಾರಾಯಿ ಮಾರಾಟದ ವಿರುದ್ಧ ತಾಲ್ಲೂಕಿನ ಮಾದಿನೂರು ಗ್ರಾಮದ ಮಹಿಳೆಯರು ಹೋರಾಟಕ್ಕಿಳಿದಿದ್ದಾರೆ. ಗ್ರಾಮದಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸುವಂತೆ ಹಲವಾರು ಬಾರಿ ಮಾಡಿದ ಮನವಿಗೆ ಅಬಕಾರಿ ಇಲಾಖೆ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಗೆ ಆಗಮಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿರುವ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ ಗ್ರಾಮದ ಮಹಿಳೆಯರನ್ನು ಒಳಗೊಂಡ ನಿಯೋಗ, ಕೂಡಲೇ ಸಾರಾಯಿ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ನಿತ್ಯವೂ ಸಾರಾಯಿ ಕುಡಿದು ಗಲಾಟೆ ಮಾಡುವ ಜನರಿಂದ ಗ್ರಾಮದ ಶಾಂತಿ ಕದಡಿದೆ. ಹೀಗಾಗಿ ಕೂಡಲೇ ಸಾರಾಯಿ ಮಾರಾಟ ನಿಷೇಧಿಸಲು ಕ್ರಮ ಕೈಗೊಂಡು ಗ್ರಾಮದಲ್ಲಿ ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದ ನಾಗಮ್ಮ ಪತ್ರಿಗಿಡ, ಅಕ್ಕಮ್ಮ, ಹನಮವ್ವ, ನಿಂಗನಗೌಡ, ಪ್ರಕಾಶ, ಹನುಮಂತ, ಮಂಜುನಾಥ ಮತ್ತಿತರರು ನಿಯೋಗದಲ್ಲಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.