ADVERTISEMENT

12 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 11:05 IST
Last Updated 10 ಸೆಪ್ಟೆಂಬರ್ 2011, 11:05 IST

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ಶುಕ್ರವಾರ 12 ಅಭ್ಯರ್ಥಿಗಳಿಂದ ಒಟ್ಟು 14 ನಾಮಪತ್ರ ಸಲ್ಲಿಕೆಯಾಗಿದೆ.

ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಕ್ರಮವಾಗಿ ಸಂಗಣ್ಣ ಕರಡಿ, ಕೆ.ಬಸವರಾಜ ಹಿಟ್ನಾಳ್ ಹಾಗೂ ಪ್ರದೀಪಗೌಡ ಮಾಲಿಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.

ಕುಷ್ಟಗಿ ತಾಲ್ಲೂಕಿನ ಮಿಟ್ಟಲಕೋಡ್ ಗ್ರಾಮದ ಸಂಗಮೇಶ್ ಹಿರೇಮಠ, ಭಾಗ್ಯನಗರದ ವಿಠ್ಠಪ್ಪ ಗೋರಂಟ್ಲಿ, ರಾಜಶೇಖರ ಶರಣಯ್ಯ ಪುರಾಣಿಕಮಠ, ಹಗರಿಬೊಮ್ಮನಹಳ್ಳಿಯ ಮನ್ಸೂರ್ ಬಾಷಾ,  ಮೌನೇಶ್ ಶಂಕರಪ್ಪ, ಗಂಗಾವತಿಯ ಚಕ್ರವರ್ತಿ ನಾಯಕ್, ಬೆಂಗಳೂರಿನ ಟಿ.ದಾಸರಹಳ್ಳಿಯ ಶಂಭುಲಿಂಗೇಗೌಡ, ಹೊಸನಿಂಗಾಪುರದ ರಾಮುಲು ತಂದೆ ವಾಸುದೇವ್ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕುಷ್ಟಗಿ ತಾಲ್ಲೂಕು ತಳುವಗೇರಾ ಗ್ರಾಮದ ಶರಣಗೌಡ ನೀಲನಗೌಡ ಎಂಬುವವರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.