ADVERTISEMENT

ಕೊಪ್ಪಳ: ಬಾಳೆತೋಟದಲ್ಲಿ ಕರಡಿ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 4:04 IST
Last Updated 24 ಏಪ್ರಿಲ್ 2021, 4:04 IST
   

ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳ ಸಮೀಪದ ಬಾಳೆ ತೋಟವೊಂದರಲ್ಲಿ ಕರಡಿ ಶನಿವಾರ ಬೆಳಗಿನ ಜಾವ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಸಮೀಪವೇ ಇರುವ ಶೇಷಪ್ಪ-ರಾಮಪ್ಪ ಎಂಬುವರ ಬಾಳೆ ಬಾಳೆ ತೋಟದಲ್ಲಿ ಕಂಡು ಬಂದಿದೆ.
ಬೆಳಗಿನ ಜಾವ ಕೃಷಿ ಚಟುವಟಿಕೆ ಹೋದಾಗ ಕರಡಿ ಸಂಚರಿಸುತ್ತಿರುವುದು ಕಂಡು ಬಂತು.

ಬಿಸಿಲಿನ ಧಗೆ ಮತ್ತು ಆಹಾರದ ಕೊರತೆಯಿಂದ ಗುಡ್ಡಗಳನ್ನು ಬಿಟ್ಟು ತೋಟದತ್ತ ಬಂದಿರುವ ಬಗ್ಗೆ ಹೇಳಲಾಗುತ್ತಿದೆ.

ಈ ಕುರಿತು ರೈತರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.