ADVERTISEMENT

ಕುಷ್ಟಗಿ: ಬೈಕ್‌ ಡಿಕ್ಕಿ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 14:17 IST
Last Updated 15 ಜನವರಿ 2022, 14:17 IST
ಬೈಕ್ ಅಪಘಾತ (ಸಾಂದರ್ಭಿಕ ಚಿತ್ರ)
ಬೈಕ್ ಅಪಘಾತ (ಸಾಂದರ್ಭಿಕ ಚಿತ್ರ)   

ಕುಷ್ಟಗಿ: ತಾಲ್ಲೂಕಿನ ಕುರುಬನಾಳ ಸೀಮಾಂತರದಲ್ಲಿ ನಡೆದ ಬೈಕ್‌ಗಳ ಪರಸ್ಪರ ಡಿಕ್ಕಿಯಲ್ಲಿ ಬೈಕ್‌ ಸವಾರ ಮೃತಪಟ್ಟು ಇನ್ನೊಬ್ಬ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕುರುಬನಾಳ ಗ್ರಾಮದ ಮಲ್ಲಪ್ಪ ದೇವೇಂದ್ರಪ್ಪ ಕರಕಪ್ಪನವರ (40) ಮೃತವ್ಯಕ್ತಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲಬುರ್ಗಾ ತಾಲ್ಲೂಕಿನ ಮಾಟಲದಿನ್ನಿ ಕಡೆಯಿಂದ ಬಂದ ಇಲ್ಲಿಯ ಜೆಸ್ಕಾಂ ಕಾವಲುಗಾರ ಹುಸೇನ್‌ಸಾಬ್‌ ಶರ್ಫುದ್ದೀನ್ ಅವರ ಬೈಕ್‌ ಮಲ್ಲಪ್ಪ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕಳಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಮಲ್ಲಪ್ಪ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಕುರಿತು ಮಲ್ಲಪ್ಪ ಅವರ ಪತ್ನಿ ನೀಡಿದ ದೂರಿನ ಅನ್ವಯ ಶರ್ಫುದ್ದೀನ್‌ ಅವರ ವಿರುದ್ಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.