ತಾವರಗೇರಾ: ಸಮೀಪದ ಕಳಮಳ್ಳಿ ಗ್ರಾಮದ ಹೊರ ವಲಯದಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಬೃಹತ್ ಗಾತ್ರದ ಗುಂಡಿಗಳಿಗೆ ತಂತಿಬೇಲಿ ಅಳವಡಿಸದೆ ಬಿಟ್ಟಿರುವವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಹೂಲಗೇರಾ ಗ್ರಾಮದ ರೇಖಪ್ಪ ರಾಠೋಡ್, ಇಳಕಲ್ನ ರಿಯಾನ್ ಬಾನು ಹುಮನಾಬಾದ್ ಅವರು ಈ ಹಿಂದೆ ಕಳಮಳ್ಳಿ ಸೀಮೆಯ ಸರ್ವೆ ನಂಬರ್ 25/9/15 ಮತ್ತು 25/9/20 ರಲ್ಲಿ ಕಲ್ಲುಗಣಿಗಾರಿಕೆ ನಡೆಸಿದ್ದರು. ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದವು. ತಂತಿಬೇಲಿ ಅಳವಡಿಸಿರಲಿಲ್ಲ. ಈ ಇಬ್ಬರ ವಿರುದ್ಧ ಸ್ಥಳೀಯ ಪ್ರಕರಣ ದಾಖಲಾಗಿದೆ’ ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.