ಗಂಗಾವತಿ: ‘ಕೊರೊನಾ ಸೋಂಕಿಗೆ ಲಸಿಕೆಯೇ ಪರಿಹಾರ. ನಾವೆಲ್ಲ ಆರೋಗ್ಯವಾಗಿದ್ದರೆ ಸಕಲವೂ ಕ್ಷೇಮವಾಗಿರುತ್ತದೆ’ ಎಂದು ಪ್ರಾಚಾರ್ಯೆ ಲಲಿತಾ ಬಾವಿಕಟ್ಟಿ ಹೇಳಿದರು.
ನಗರದ ಎಚ್.ಆರ್.ಶ್ರೀರಾಮುಲುಕಾಲೇಜಿನಲ್ಲಿ ಕೋವಿಡ್ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿ ಇದೆ. ಸರ್ಕಾರದ ಆದೇಶದಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ಪ್ರಶಂಸನೀಯ ಎಂದರು.
ಕೊರೊನಾ ತಡೆಗಟ್ಟಲು ಅವರಿಗೆ ಸಹಕರಿಸುವುದರ ಮೂಲಕ ನಾವೆಲ್ಲ ಸದೃಢ ರಾಷ್ಟ್ರದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಆರೋಗ್ಯಾಧಿಕಾರಿ ಡಾ.ರಮೇಶ ದರೋಜಿ ಮತ್ತು ಆರೋಗ್ಯ ಸಹಾಯಕಿಯರಾದ ಸರಸ್ವತಿ, ಹನುಂತಮ್ಮ ಅವರನ್ನು ಕಾಲೇಜಿನ ವತಿಯಿಂದ ಪ್ರಾಚಾರ್ಯರು ಸನ್ಮಾನಿಸಿದರು. ಡಾ.ವಿಜಯಾನಂದ ವಗ್ಗೆ, ವಿರುಪಾಕ್ಷಪ್ಪ ಕಲಕೇರಿ, ಇಂದಿರಾ,ವಿನಯ್, ಹನುಮಂತಪ್ಪ, ರಮೇಶ ಪೂಜಾರ, ದೊಡ್ಡಬಸಮ್ಮ, ಸಾಯಿಕುಮಾರ ಹಾಗೂ ವಿನಾಯಕ ಇದ್ದರು.
ಗುಂಡೂರು ಪವನ್ ಕುಮಾರ್ ಅವರು ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.