ADVERTISEMENT

ಚಿಕ್ಕಬಗನಾಳ: ಕ್ರಿಕೆಟ್ ಟೂರ್ನಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 12:28 IST
Last Updated 14 ಡಿಸೆಂಬರ್ 2020, 12:28 IST
ಕೊಪ್ಪಳ ತಾಲ್ಲೂಕಿನ ಚಿಕ್ಕ ಬಗನಾಳ ಗ್ರಾಮದಲ್ಲಿ ಕ್ರಿಕೆಟ್‌ ಟೂರ್ನಿಗೆ ಗ್ರಾಮದ ಮುಖಂಡರು ಚಾಲನೆ ನೀಡಿದರು
ಕೊಪ್ಪಳ ತಾಲ್ಲೂಕಿನ ಚಿಕ್ಕ ಬಗನಾಳ ಗ್ರಾಮದಲ್ಲಿ ಕ್ರಿಕೆಟ್‌ ಟೂರ್ನಿಗೆ ಗ್ರಾಮದ ಮುಖಂಡರು ಚಾಲನೆ ನೀಡಿದರು   

ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಲಕ್ಷ್ಮೀ ನರಸಿಂಹೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಗೆ ಗ್ರಾಮದ ಹಿರಿಯ ಮುಖಂಡರಾದ ಬನ್ನೆಪ್ಪಗೌಡ ಕೆ.ಪೊಲೀಸ್ ಪಾಟೀಲಹಾಗೂ ಬಸವರಾಜ ಬಂಗಾಳಿ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದಅವರು,‘ಯುವಜನತೆ ಮೊಬೈಲ್‍ಗಳಿಗೆ ಮಾರು ಹೋಗದೆ ಕ್ರಿಕೆಟ್, ಕಬಡ್ಡಿ, ವಾಲಿಬಾಲ್‌ನಂಥ ಕ್ರೀಡೆಗಳ ಬಗ್ಗೆ ಒಲವು ತೋರಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ. ಗ್ರಾಮದಲ್ಲಿ ಸುಮಾರು ಸತತ 15 ವರ್ಷಗಳಿಂದ ಕ್ರಿಕೆಟ್ಟೂರ್ನಿ ಏರ್ಪಡಿಸುತ್ತ ಬಂದಿರುವುದು ಶ್ಲಾಘನೀಯ’ ಎಂದರು.

ನಂತರ ಎಸ್‍ಡಿಎಂಸಿ ಅಧ್ಯಕ್ಷ ಎಂ.ಡಿ.ಬೆಟಗೇರಿ ಮಾತನಾಡಿ,‘ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವುದು ಬಹುಮುಖ್ಯವಾಗಿದೆ. ಆಟಗಳೆಂದರೇ ಒಬ್ಬರು ಸೋಲೊಪ್ಪಲೇಬೇಕು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ಎಲ್ಲವನ್ನು ಸಮನಾಗಿ ಸ್ವೀಕರಿಸಿ ಮುನ್ನುಗ್ಗಬೇಕುಎಂದರು.

ADVERTISEMENT

ಗ್ರಾಮದ ಮುಖಂಡರಾದ ಕನಕಪ್ಪ ಮುಂಡರಗಿ, ರಾಮಣ್ಣ ಚೌಡ್ಕಿ, ದಾದಾಪೀರ್ ಬೆಟಗೇರಿ, ರಾಜಕುಮಾರ, ಹುಸೇನಪ್ಪ, ಶೇಖಪ್ಪ ಬಂಗಾಳಿ, ಮಾರುತಿ ಪಿ, ಮಂಜುನಾಥ ಪೊಲೀಸ್ ಪಾಟೀಲ, ಗುರುರಾಜ ಮಾಲಿಪಾಟೀಲ., ಬಸವರಾಜ, ನಾಗರಾಜ ಉಬ್ಬಲಗುಂಡಿ, ಕೃಷ್ಣಪ್ಪ ಮ್ಯಾಗೇರಿ, ರಾಜಾಸಾಬ್ಪಿಂಜಾರ್‌, ರವಿಚಂದ್ರ ಬಿ.ಬಡಿಗೇರ, ರಾಮಣ್ಣ ನಿಂಗಾಪುರ, ಅಶೋಕ ದಾಸರ, ನಿಂಗರಾಜ ವೀರಾಪುರ, ಕ್ರಿಕೆಟ್ ಕ್ಲಬ್‍ನ ಮುಖ್ಯಸ್ಥರಾದ ಶಂಕರಗೌಡ, ಜಗದೀಶಗೌಡ, ಮುಕ್ಕಣ್ಣ ಹಾಗೂ ನಿಂಗನಗೌಡ ಇದ್ದರು.

ಈ ಕ್ರೀಡೆಯಲ್ಲಿ 5 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಒಟ್ಟು 34 ತಂಡಗಳು ಭಾಗವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.