ಗಂಗಾವತಿ: ನಗರದಿಂದ ಚಿಕ್ಕಜಂತಕಲ್ಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯದ ವಿಜಯನಗರ ಅಪ್ಪರ್ ಕಾಲುವೆ ಸಮೀಪದ ಗದ್ದೆಯಲ್ಲಿ ಬುಧವಾರ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಮಧ್ಯಾಹ್ನ ಗದ್ದೆಗೆ ನೀರು ಹರಿಸಲು ಹೋದಾಗ ಮೊಸಳೆ ಕಾಣಿಸಿಕೊಂಡಿದೆ. ರೈತರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರ ವಿಜಯನಗರ ಲೋವರ್ ಕಾಲುವೆ ಬಳಿ ಮೊಸಳೆ ಮೇಕೆ ಮರಿಯನ್ನು ತಿಂದು ಹಾಕಿತ್ತು.
‘ಗದ್ದೆಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಆತಂಕಕ್ಕೆ ಒಳಗಾಗಿದ್ದೇವೆ’ ಎಂದು ರೈತ ಕಳಕಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.