ADVERTISEMENT

ಸಂಘಗಳಿಗೆ ಲಾಭಾಂಶ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 5:45 IST
Last Updated 11 ಜುಲೈ 2021, 5:45 IST
ಮುನಿರಾಬಾದ್‌ನ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳಿಗೆ ವಲಯ ಮೇಲ್ವಿಚಾರಕ ಮಹಾಂತೇಶ ಲಾಭಾಂಶ ಹಸ್ತಾಂತರಿಸಿದರು
ಮುನಿರಾಬಾದ್‌ನ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳಿಗೆ ವಲಯ ಮೇಲ್ವಿಚಾರಕ ಮಹಾಂತೇಶ ಲಾಭಾಂಶ ಹಸ್ತಾಂತರಿಸಿದರು   

ಮುನಿರಾಬಾದ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ತಂಡಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಸಂಸ್ಥೆಯ ಹಿಟ್ನಾಳ ವಲಯ ಮೇಲ್ವಿಚಾರಕ ಎ.ಮಹಾಂತೇಶ ಮಾತನಾಡಿ, ‘ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 2,925 ಸಂಘಗಳಿದ್ದು, ₹ 4.89 ಕೋಟಿ ಲಾಭಾಂಶ ವಿತರಿಸಲಾಗುತ್ತಿದೆ. ಹಿಟ್ನಾಳ ವಲಯ ವ್ಯಾಪ್ತಿಯ ಕಂಪಸಾಗರ ಕಾರ್ಯಕ್ಷೇತ್ರದಲ್ಲಿ ಒಟ್ಟು 20 ತಂಡಗಳಿಗೆ ₹.3.41ಲಕ್ಷ ಲಾಭಾಂಶವನ್ನು ಘೋಷಿಸಲಾಗಿದೆ’ ಎಂದರು.

‘ಹಿಟ್ನಾಳ ವಲಯ ವ್ಯಾಪ್ತಿಯಲ್ಲಿ 157 ತಂಡಗಳಿಗೆ ₹. 27.42 ಲಕ್ಷ ಹಣವನ್ನು ಲಾಭಾಂಶವೆಂದು ತೆಗೆದಿರಿಸಲಾಗಿದೆ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ, ಸಾಲ ಪಡೆದು ಮತ್ತು ಮರುಪಾವತಿಸಿ ಉತ್ತಮ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತಿದೆ’ ಎಂದರು.

ADVERTISEMENT

ಕಂಪಸಾಗರ ಗ್ರಾಮದ ಶ್ರೀಅನ್ನಪೂರ್ಣೆಶ್ವರಿ, ಶ್ರೀ ದುರ್ಗಾ, ಬಸವೇಶ್ವರ ಗಂಗಾಪರಮೇಶ್ವರಿ, ಗಂಗಾಪರಮೇಶ್ವರಿ, ನವಶಕ್ತಿವೈಭವ, ಮಹಾವೀರ ಹಾಗೂ ಶ್ರೀರಾಮ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಸೇವಾ ಪ್ರತಿನಿಧಿ ಕೆ.ಗೀತಾ ಮತ್ತು ಸಿಬ್ಬಂದಿ ಹುಚ್ಚಿರಪ್ಪ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.