ADVERTISEMENT

ಗಂಗಾವತಿ: ಮದ್ಯದ ಅಮಲಿನಲ್ಲಿ ಕಾಲುವೆಗೆ ಬಿದ್ದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:42 IST
Last Updated 22 ಆಗಸ್ಟ್ 2025, 5:42 IST
ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ವ್ಯಕ್ತಿಯ ಶೋಧಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನಿಸಿದರು
ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ವ್ಯಕ್ತಿಯ ಶೋಧಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನಿಸಿದರು   

ಗಂಗಾವತಿ (ಕೊಪ್ಪಳ ಜಿಲ್ಲೆ): ಮದ್ಯದ ಮತ್ತಿನಲ್ಲಿ ವಾಂತಿ ಮಾಡಲು ತೆರಳಿದ ಯುವಕನೊಬ್ಬ ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆ ಸಮೀಪದ ಗಂಗಮ್ಮಗುಡಿ ಬಳಿ (ಜಂಗ್ಲಿ ಕ್ರಾಸ್) ತುಂಗಭದ್ರಾ ಎಡದಂಡೆ ಕಾಲುವೆಗೆ ಕಾಲುಜಾರಿ ಗುರುವಾರ ಬಿದ್ದಿದ್ದಾನೆ.

ಗಂಗಾವತಿಯ ಜಯನಗರದ ವಿಸ್ಡಂ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕ ರಾಜಕಿರಣ್ ಇಂಗಲಳ್ಳಿ (36) ಕಾಲುವೆಗೆ ಬಿದ್ದಿದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ.

‘ವೈಯಕ್ತಿಕ ಸಮಸ್ಯೆಗಳ ಕಾರಣಕ್ಕೆ ಸಾಣಾಪುರ ಭಾಗಕ್ಕೆ ಬಂದು ಸತತವಾಗಿ ಮದ್ಯಸೇವನೆ ಮಾಡಿದ್ದ. ಕೆರೆಯತ್ತ ಕಾರಿನಲ್ಲಿ ಬಂದು ಜಂಗ್ಲಿ ಕ್ರಾಸ್ ಬಳಿ ವಾಂತಿ ಮಾಡುವುದಾಗಿ ಕಾಲುವೆಗೆ ಇಳಿದಾಗ, ಆಕಸ್ಮಿಕವಾಗಿ ಬಿದ್ದಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಜೊತೆಗಿದ್ದ ಶಾಲೆಯ ಸಿಬ್ಬಂದಿ ಆತನ ರಕ್ಷಣೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ’ ಎಂದು ಮೂಲಗಳು ತಿಳಿಸಿವೆ.   

ADVERTISEMENT

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಪರಿಶೀಲಿಸಿದರು. ಕೊಚ್ಚಿಹೋದ ವ್ಯಕ್ತಿಗಾಗಿ ತೆಪ್ಪದಲ್ಲಿ ಶೋಧ ಕಾರ್ಯ ನಡೆಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.