ಕುಷ್ಟಗಿ: ತಾಲ್ಲೂಕಿನ ಚಳಗೇರಾ ಗ್ರಾಮದ ಜಮೀನಿನಲ್ಲಿ ಕಟಾವು ಮಾಡಿದ ಸೂರ್ಯಕಾಂತಿಯನ್ನು ಟ್ರ್ಯಾಕ್ಟರ್ನಲ್ಲಿ ಪಕ್ಕದ ಜಮೀನಿಗೆ ಸಾಗಿಸುತ್ತಿದ್ದಾಗ ಹೈಟೆನ್ಷನ್ ತಂತಿ ಬಿದ್ದು ತಂದೆ ಮತ್ತು ಇಬ್ಬರು ಮಕ್ಕಳುಮೃತಪಟ್ಟಿದ್ದಾರೆ.
ಗ್ರಾಮದ ರೈತ ಹನುಮಂತ ಬೀರಪ್ಪನವರ (35) ಹಾಗೂ ಪುತ್ರಿ ಪ್ರಿಯಾಂಕಾ (4) ಹಾಗೂ ಬೀರಪ್ಪ (2) ಮೃತರು.
ಹನುಮಂತ ಅವರ ಪತ್ನಿ ಶಿಲ್ಪಾ ಕಾಲಿಗೆ ಗಾಯವಾಗಿದೆ. ಟ್ರ್ಯಾಕ್ಟರ್ ಚಾಲಕ ಗ್ಯಾನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಮೀನಿನಲ್ಲಿ ಹಾದುಹೋಗಿರುವ 11 ಕೆ.ವಿ ವಿದ್ಯುತ್ ತಂತಿ ಟ್ರಾಲಿ ಮೇಲೆ ಹರಿದುಬಿದ್ದಿದೆ. ವಿದ್ಯುತ್ ಪ್ರವಹಿಸುತ್ತಿದ್ದಂತೆ ಟ್ರಾಲಿಯಲ್ಲಿ ಕುಳಿತಿದ್ದ ಶಿಲ್ಪಾ ಅವರನ್ನು ಗಂಡ ಹನುಮಂತಪ್ಪ ತಕ್ಷಣ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಆದರೆ, ಮಕ್ಕಳನ್ನು ಟ್ರಾಲಿಯಿಂದ ಕೆಳಕ್ಕಿಳಿಸಬೇಕು ಎನ್ನುವಷ್ಟರಲ್ಲಿಯೇ ಮೂವರೂ ಅಸುನೀಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.