ಕೊಪ್ಪಳ: ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಜನ್ಮ ದಿನದ ಪ್ರಯುಕ್ತ ನ. 12ರಂದು ಬೆಳಿಗ್ಗೆ 10.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಆಚರಿಸಲಾಗುವುದು ಎಂದು ಕೊಪ್ಪಳದ ಯುವ ಸಮಿತಿಯ ನಾಯಕ ಅಮ್ಜದ್ ಪಟೇಲ ತಿಳಿಸಿದ್ದಾರೆ.
ಕೊಪ್ಪಳದ ಮುಸ್ಲಿಂ ಯುವ ಸಮಿತಿ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ಶಿವಯೋಗಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ತುಮಕೂರಿನ ಪ್ರಗತಿಪರ ಚಿಂತಕ ನೀಕೆತ್ ರಾಜಮೌರ್ಯ, ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ ಮುರೊಳ್ಳಿ ಪಾಲ್ಗೊಳ್ಳುವರು.
ಮುಸ್ಲಿಂ ಧರ್ಮಗುರು ಕೊಪ್ಪಳದ ಮೌಲಾನಾ ಮುಫ್ತಿ ಮಹಮ್ಮದ್ ನಜೀರ ಅಹಮ್ಮದ್ ಖಾದ್ರಿ ತಸ್ಕೀನ್, ಸಭಾಪಾಲಕ ರೆವರೆಂಡ್ ಜೆ.ರವಿಕುಮಾರ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅತಿಥಿಗಳಾಗಿ ಭಾಗವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.