ಕೊಪ್ಪಳ: ಇಲ್ಲಿನ ಈಶ್ವರ ಪಾರ್ಕ್ನಲ್ಲಿ ಹಿಂದೂ ಮಹಾಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ 15ನೇ ದಿನದ ವಿಸರ್ಜನಾ ಮೆರವಣಿಗೆಯಲ್ಲಿ ಸೋಮವಾರ ರಾತ್ರಿ ಸಂಸದ ಸಂಗಣ್ಣ ಕರಡಿ ಸಾವಿರಾರು ಜನರ ನಡುವೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು.
ಕಣ್ಣು ಕೊರೈಸುವ ಬೆಳಕು, ಡಿಜೆ ಅಬ್ಬರದ ಸುದ್ದಿನ ನಡುವೆ ಈಶ್ವರ ಪಾರ್ಕ್ನಿಂದ ಅಶೋಕ ಸರ್ಕಲ್ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಸಂಸದರು ಕುಣಿದರು.
ಕೊರಳಲ್ಲಿ ಕೇಸರಿ ಶಾಲು ಧರಿಸಿದ್ದ ಅವರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತುಕೊಂಡರು. ಇದಕ್ಕೂ ಮೊದಲು ಸಂಸದರ ಸೊಸೆ ಮಂಜುಳಾ ಅಮರೇಶ ಕರಡಿ ಮೆರವಣಿಯಲ್ಲಿ ಕುಣಿದು ಸಂಭ್ರಮಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.